ಬಿಎಂ. ಪಾಟೀಲರಿಗೆ ಅರಸು ಪ್ರಶಸ್ತಿ ಸನ್ಮಾನ

ಬಳ್ಳಾರಿ : ಡಿ.ದೇವರಾಜ ಅರಸು ರಾಜ್ಯ ಪ್ರಶಸ್ತಿ ಪಡೆದ, ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಬಿಎಂ ಪಾಟೀಲ್ ರವರಿಗೆ ವಿಜಯನಗರ ಜಿಲ್ಲೆಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರು ಹಾಗೂ ಕುರುಬರ ಸಂಘದ ಗೌರವಧ್ಯಕ್ಷ  ಆರ್.ಆರ್. ತಾಯಪ್ಪ, ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀ ಜೋoಡಿ ಲಿಂಗಪ್ಪ, ಜಿಲ್ಲಾ ಖಜಾಂಚಿ ರಾಜಕುಮಾರ, ತಾಲ್ಲೂಕು ಅಧ್ಯಕ್ಷ ಕೊಂಡನಾಯಕನಹಳ್ಳಿ ರಾಘವೇಂದ್ರ, ಗೌರವಧ್ಯಕ್ಷ ಹಾಗೂ ರೈತ ಸಂಘದ ಅಧ್ಯಕ್ಷ ನೂಲಿ ರಾಘವೇಂದ್ರ ಮುಂತಾದವರು ಸನ್ಮಾನಿಸಿ ಗೌರವಿಸಿದರು.

ರಾಯಚೂರಿನಲ್ಲಿ ಡಿ ದೇವರಾಜ ಅರಸು ದಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಸಂಘಟನೆಯಿಂದ ಕೊಡಮಾಡಿದ ರಾಜ್ಯ ಡಿ ದೇವರಾಜ ಅರಸು ರತ್ನ ಪ್ರಶಸ್ತಿಯನ್ನು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯದ್ಯಕ್ಷರು ಕೆಪಿಸಿಸಿ ರಾಜ್ಯ ವಕ್ತಾರರಾದ ಎಂಬಿ ಪಾಟೀಲ್ ರವರಿಗೆ ದೊರಕಿದ ನಿಮಿತ್ತ ಇಂದು ವಿಜಯನಗರ ಜಿಲ್ಲೆಯ ರೈತ ಸಂಘದವರು ಬಿ ಎಂ ಪಾಟೀಲ್ ರವರಿಗೆ ಸನ್ಮಾನಿಸಿ ಗೌರವಿಸಿದರು.

ಹಿಂದುಳಿದವರ ಮತ್ತು ಸಮಾಜದ ಒಳಿತಿಗಾಗಿ ರಾಜ್ಯಾದ್ಯಂತ ಸಂಚರಿಸಿ ಹಿಂದುಳಿದ ವರ್ಗದ ರನ್ನು ಮತ್ತು ಸಮಾಜವನ್ನು ಸಂಘಟಿಸುತ್ತಿದ್ದೇನೆ.ಸಮಾಜದ ಒಳಿತಿಗಾಗಿ ಹಿಂದುಳಿದ ವರ್ಗದ ಒಳಿತಿಗಾಗಿ ಹಲವಾರು ಸಂಘಟನೆಯಲ್ಲಿ ಪಾಲ್ಗೊಂಡು ಹಿಂದುಳಿದವರಿಗೆ ಸಾಮಾಜಿಕ ರಾಜಕೀಯ ನೆಲೆಕಂಡುಕೊಳ್ಳಲು ಶ್ರಮಿಸುವುದಾಗಿ ತಿಳಿಸಿದರು.ಡಿ. ದೇವರಾಜ್ ಅರಸು ರತ್ನ ಪ್ರಶಸ್ತಿ ನನಗೆ ಬಂದಿರುವುದು ಅತ್ಯಂತ ಸಂತಸದ ವಿಚಾರವಾಗಿದೆ. ಈ ಪ್ರಶಸ್ತಿಯಿಂದ ಹಿಂದುಳಿದವರ  ಒಳಿತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ರಾಜ್ಯ ಮತ್ತು ರಾಷ್ಟ್ರದಲ್ಲಿ ಶ್ರಮಿಸುವೆ ಈ ಪ್ರಶಸ್ತಿಯಿಂದ ನನಗೆ ಇನ್ನಷ್ಟು ಜವಾಬ್ದಾರಿ ಹೆಚ್ಚಾಗಿದೆ ಎಂದು ಬಿಎಮ್ ಪಾಟೀಲ ಹೇಳಿದರು

About The Author