ರಸ್ತೆ ದುರಸ್ತಿಗೆ ನಮ್ಮ ಕರ್ನಾಟಕ ಸೇನೆ ಒತ್ತಾಯ

yadagiri ವಡಗೇರಾ.ವಡಗೇರಾದಿಂದ ತುಮಕೂರಿಗೆ ಹೋಗುವ  ಮುಖ್ಯರಸ್ತೆ  ತುಂಬಾ ಹದಗೆಟ್ಟಿದ್ದು  ರಸ್ತೆಯ ಮೇಲೆ ಹಲವಾರು ಗುಂಡಿಗಳು ಬಿದ್ದಿದ್ದು ವಾಹನಗಳು ಓಡಾಡಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ರಸ್ತೆಯನ್ನು ಸರಿಪಡಿಸಿ ಕೊಡಬೇಕೆಂದು, ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ರಸ್ತೆಯನ್ನು ಸರಿಪಡಿಸಿಕೊಡಬೇಕೆಂದು ನಮ್ಮ ಕರ್ನಾಟಕ ಸೇನೆ ತಾಲ್ಲೂಕು ಅಧ್ಯಕ್ಷ  ಸಂತೋಷ ಬೊಜ್ಜಿ ಆಗ್ರಹಿಸಿದರು.

About The Author