ಕುರಿ ಮಹಾಮಂಡಳಿ ಅಧ್ಯಕ್ಷರಾಗಿ ಶರಣು ತಳ್ಳಿಕೇರಿ

ಬೆಂಗಳೂರು:ಕರ್ನಾಟಕ ಕುರಿ ಮತ್ತು ಮೇಕೆ ಸಾಕಾಣಿಕೆ ದಾರರ ಮಹಾಮಂಡಳಿಯ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ಮುಖಂಡರಾದ ಶರಣು ಬಿ ತಳ್ಳಿಕೇರಿ ಯವರು ಆಯ್ಕೆಯಾಗಿದ್ದಾರೆ. ಶುಕ್ರವಾರದಂದು ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಒಟ್ಟು ಹದಿನಾಲ್ಕು ಜನ ನಿರ್ದೇಶಕರು ಮತ್ತು ಅದರಲ್ಲಿ ಇತರ ಸಹಕಾರಿ ಮಹಾಮಂಡಳಿಯಿಂದ ಆರು ಜನ ನಿರ್ದೇಶಕರು ಪಾಲ್ಗೊಂಡಿದ್ದು, ಮ.12.00 ಗಂ ಅಧ್ಯಕ್ಷರ ಆಯ್ಕೆಗಾಗಿ ಶರಣು ಬಿ ತಳ್ಳಿಕೇರಿ ಮತ್ತು ಪಂಡಿತರಾವ್ ಚಿದ್ರಿ ಯವರು ನಾಮನಿರ್ದೇಶನ ಮಾಡಿದ್ದರು.

ಮ.2.30 ಕ್ಕೆ ಚುನಾವಣೆ ನಡೆದು ತಳ್ಳಿಕೇರಿ ಯವರು 11 ಮತಗಳನ್ನು ಪಡೆದು ಜಯಶಾಲಿಯಾದರು. 8 ಮತಗಳನ್ನು ಪಡೆದ ಪಂಡಿತ್ ರಾವ್ ಚಿದ್ರಿ ಯವರು ಪರಾಭವಗೊಂಡರು. ಕಳೆದ ಐದು ವರ್ಷಗಳ ಹಿಂದೆ ಪಂಡಿತರಾವ್ ಚಿದ್ರಿ ಯವರು ಕುರಿ ಮಹಾಮಂಡಳಿ ಅಧ್ಯಕ್ಷರಾಗಿದ್ದರು.ಪ್ರಸ್ತುತ ಶರಣು ತಳ್ಳಿಕೇರಿ ಯವರು ಕುರಿ ಮಹಾಮಂಡಳದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು. ಅವರ ಅಭಿಮಾನಿ ಬಳಗ ಮತ್ತು ಕಾರ್ಯಕರ್ತರಿಗೆ ಸಂತಸ ತಂದಿದೆ.

About The Author