ವಿಶ್ವೇಶ್ವರ ಶಿವನ ಅನುಗ್ರಹ,ಮಹಾದೇವಮ್ಮನವರು ಮಲದಕಲ್ ಗ್ರಾಪಂಯ ಅಧ್ಯಕ್ಷರಾದರು.

ರಾಯಚೂರು : ಮಹಾಶೈವ ಧರ್ಮಪೀಠದ ಕ್ಷೇತ್ರಾಧೀಶ ವಿಶ್ವೇಶ್ವರ ಶಿವನ ಅನುಗ್ರಹದಿಂದ ಶ್ರೀಮತಿ ಮಹಾದೇವಮ್ಮ ಗಂಡ ಈಶ್ವರಯ್ಯ ಸ್ವಾಮಿ ಇವರು ಮಲದಕಲ್ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ 07.08.2023 ರಂದು ಆಯ್ಕೆಯಾಗಿದ್ದಾರೆ.ವಿಶ್ವೇಶ್ವರ ಶಿವನಿಗೆ ಕೃತಜ್ಞತಾಪೂರ್ವಕ ಭಕ್ತಿಪೂರ್ವಕ ನಮನಗಳನ್ನು ಸಮರ್ಪಿಸಲು ಅವರು ಇಂದು ಕುಟುಂಬ ಸಮೇತ ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶ್ರೀಮತಿ ಮಹಾದೇವಮ್ಮ ಅವರನ್ನು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿದರು.

ಶ್ರೀಮತಿ ಮಹಾದೇವಮ್ಮನವರು ಅವರ ಹಿರಿಯಮಗ ಸೂಗೂರೇಶ ಅವರ ಜೊತೆ 02.07.2023 ರಂದು ಮಹಾಶೈವ ಧರ್ಮಪೀಠದಲ್ಲಿ ನಡೆದ 52 ನೆಯ ‘ಶಿವೋಪಶಮನ ಕಾರ್ಯ’ದಲ್ಲಿ ಪಾಲ್ಗೊಂಡು ಮಲದಕಲ್ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಲು ಇಚ್ಛಿಸಿ ಶಿವಾನುಗ್ರಹ ಕೋರಿ ಬಂದಿದ್ದರು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರಶಿವನಲ್ಲಿ ಮಹಾದೇವಮ್ಮನವರು ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಆಯ್ಕೆಯಾಗಲು‌ ಪ್ರಾರ್ಥಿಸಿ ‘ ಮಲದಕಲ್ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗುತ್ತೀರಿ’ ಎಂದು ಶಿವಾಭಯವನ್ನು ಕರುಣಿಸಿದ್ದಲ್ಲದೆ ‘ ಮಲದಕಲ್ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಮಹಾದೇವಮ್ಮನವರೆ’ ಎಂದು ಕರೆದಿದ್ದರು.ಅದರಂತೆ ನಿನ್ನೆ ಮಹಾದೇವಮ್ಮನವರು ಮಲದಕಲ್ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪೀಠಾಧ್ಯಕ್ಷರು ಮಹಾದೇವಮ್ಮನವರನ್ನು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿ,ಯಶಸ್ಸು ಹಾರೈಸಿದ ಈ ಶುಭ ಕ್ಷಣಗಳಲ್ಲಿ  ತ್ರಯಂಬಕೇಶ,ಗೋಪಾಲ ಮಸೀದಪುರ,ಉಮೇಶ ಸಾಹುಕಾರ ಅರಷಣಗಿ, ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ,ಮೃತ್ಯುಂಜಯ ಯಾದವ,ಯಲ್ಲಪ್ಪ ಕರಿಗಾರ, ಉದಯಕುಮಾರ ಮಡಿವಾಳ ಹಾಗೂ ಮಹಾದೇವಮ್ಮನವರ ಹಿರಿಯ ಮಗ ಸೂಗೂರೇಶ,ಕಿರಿಯ ಮಗ ಗೌರಿಶಂಕರ ಹಾಗೂ ಸೊಸೆ ಶಿಲ್ಪಾ ಗೌರಿಶಂಕರ ಉಪಸ್ಥಿತರಿದ್ದರು.

 

About The Author