ದೇವದುರ್ಗ:ತಾಲ್ಲೂಕಿನ ಖಾನಾಪುರ ಗ್ರಾಮದ ಕೂಡ್ಲೂರು ಬಸವಲಿಂಗೇಶ್ವರ ಜಾತ್ರೆ ಇಂದಿನಿಂದ ಜರುಗಲಿದ್ದ ಕಲಿಯುಗದ ಕಡೆ ಶರಣನೆಂದು ಬಸವಲಿಂಗಪ್ಪಜ್ಜನವರನ್ನು ಕರೆಯುತ್ತಿದ್ದು, ಇಂದು ರಾತ್ರಿ10:00 ಗಂಟೆಗೆ ಊರೊಳಗಿನ ಮಠದಿಂದ ನಂದಿಕೋಲು ಸೇವೆ ಭಜನೆ ಸಹಿತ ಕಳಸಾರೋಹಣ ಜರುಗಲಿದ್ದು ನಾಳೆ ಸಾಯಂಕಾಲ 6:00 ಗಂಟೆಗೆ ಮಹಾರಥೋತ್ಸವ ಜರುಗಲಿದೆ ಎಂದು ಗ್ರಾಮದ ಚಿದಾನಂದ ಖಾನಾಪುರ ಪ್ರಕಟಣೆಯಲ್ಲಿ ತಿಳಿಸಿದರು.