ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವಂತೆ ಅಧಿಕಾರಿಗಳಿಗೇ ಶಾಸಕರ ಖಡಕ ಸಂದೇಶ

ವಡಗೇರಾ : ತಾಲೂಕಿನ  ಸಂಗಮದ ಸುಕ್ಷೇತ್ರ ಸಂಗಮೇಶ್ವರ ದೇವಸ್ಥಾನಕ್ಕೆ ಇಂದು ನೂತನ ಶಾಸಕ ಚನ್ನಾ ರೆಡ್ಡಿ ಗೌಡ ತುನ್ನೂರ ರವರು ಭೇಟಿ ನೀಡಿ ಆಶೀರ್ವಾದ ಪಡೆದರು ಸಂಗಮೇಶ್ವರ ದೇವಸ್ಥಾನದ ಪೀಠಾಧಿಪತಿಗಳಾದ ಶ್ರೀ ಕರುಣೇಶ್ವರ ಸ್ವಾಮಿಗಳು ಆಶೀರ್ವಾದ ನೀಡಿ ಮಾತನಾಡಿದರು. ನೂತನ ಶಾಸಕರು ನೂತನ ತಾಲೂಕು ವಡಗೇರಾ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ತಾಲೂಕು ಕಚೇರಿಗಳನ್ನು ಆರಂಭಿಸುವುದರ ಜೊತೆಗೆ ಬಡವರ ದಿನದಲಿತರ ಪರವಾಗಿ ಹಗಲಿರಳು ಶ್ರಮಿಸುವಂತೆ ಸಲಹೆ ನೀಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಶಾಸಕರು. ಎಲ್ಲಾ ಜನರ ಸಹಕಾರದಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ ಮುಂದಿನ ದಿನಗಳಲ್ಲಿ ಯಾದಗಿರಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಮತ್ತು ಗ್ರಾಮೀಣ ಪ್ರದೇಶದ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನ ಮಾಡುತ್ತೇನೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಖಡಕ್ ಸಂಧೆಶ ನೀಡಿದ್ದೇನೆ ಯಾವುದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು. ವಡಗೇರಾ ತಾಲೂಕಿನ. ಸಂಗಮ. ಗುಂಡ್ಲುರ ಅಗ್ನಿಹಾಳ . ಶಿವಪುರ. ಗೋನಾಲ.ಕೊಡಲ‌‌. ಕೊಂಗಡಿ . ಜೋಳದಡಗಿ ಇನ್ನಿತರ ಗ್ರಾಮಗಳಿಗೆ ತೆರಳಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದರು.ಈ ಸಮಯದಲ್ಲಿ ಸಂಗಮದ ಶ್ರೀ ಕರುಣೇಶ್ವರ ಮಹಾಸ್ವಾಮಿಗಳು ನೂತನ ಶಾಸಕರಿಗೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ . ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ. ಶ್ರೀನಿವಾಸ್ ರೆಡ್ಡಿ ಚೆನ್ನುರು . ಕಾಂಗ್ರೆಸ್ ಮುಖಂಡರಾದ. ಡಾ.ಎಸ. ಬಿ . ಕಾಮ್ ರೆಡ್ಡಿ. ಭಾಷುಮಿಯಾ ನಾಯ್ಕೋಡಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರೇಪ್ಪ ಬಿಳಾರ. ಬಸು ಗೌಡ ಬಿಳಾರ‌. ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸಿದ್ದರಾಮ ರೆಡ್ಡಿ ಗೌಡ ಕೌವಳೂರ. ಡಾ. ಭೀಮಣ್ಣ ಮೇಟಿ. ಮಾಜಿ ಸದಸ್ಯ ಚಂದ್ರಶೇಖರಗೌಡ ಗೂನಾಲ. ಮಲ್ಲಿಕಾರ್ಜುನ್ ರೆಡ್ಡಿ ಬೆನಕನಹಳ್ಳಿ. ಶರಣಪ್ಪ ಕ್ಯಾತ್ನಳಾ. ಗುರುನಾಥ ರೆಡ್ಡಿ ಗೌಡ ಕದರಾಪುರ. ಗೋನಾಲ ಗ್ರಾಮ ಪಂಚಾಯತ್ ಅಧ್ಯಕ್ಷ ಸಂದೀಪ ಗೌಡ. ಬಸವರಾಜ ಕ್ವಾಟರ್ ಪಲ್ಲಿ. ಈಶಪ್ಪ ಗೌಡ ಅಗ್ನಿಹಾಳ. ಬಸಯ್ಯಸ್ವಾಮಿ ಶಿವಪುರ. ಹಾಗೂ . ವಡಗೇರಾ ತಸಿಲ್ದಾರ್ ಹಲಿಮಾ. ತಾಲೂಕು ಪಂಚಾಯಿತ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ಹಾಗೂ ತಾಲೂಕಿನ ಇನ್ನಿತರ ಅಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author