ಸಿದ್ದರಾಮಯ್ಯನವರನ್ನು ಸಿಎಂ ಮಾಡಿ.ದರ್ಶನಾಪುರವರನ್ನು ಮಂತ್ರಿ ಮಾಡುವಂತೆ ಪಾಟೀಲ್ ಮನವಿ

ಶಹಾಪುರ : ಈ ನಾಡಿನ ಸರ್ವ ಜನಾಂಗದ ನಾಯಕ ಸಿದ್ದರಾಮಯ್ಯ.ಹಳ್ಳ ಹಿಡಿದಿರುವ ರಾಜ್ಯದ ಆಡಳಿತ ಯಂತ್ರವನ್ನು  ಸರಿದಾರಿಗೆ ತರಲು ಸದ್ಯದ ಮಟ್ಟಿಗೆ ಶಕ್ತಿ ಇರುವ ಏಕೈಕ ನಾಯಕ ಸಿದ್ದರಾಮಯ್ಯ ಮಾತ್ರ ಆದ್ದರಿಂದ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ
ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿಗಳಾದ ಶಾಂತಕುಮಾರ್ ಪಾಟೀಲ್ ಮನವಿ ಮಾಡಿದ್ದಾರೆ. ಯಾದಗಿರ ಜನರ ನಿರೀಕ್ಷೆಯ ಐದು ಗ್ಯಾರಂಟಿಗಳನ್ನು ರಾಜ್ಯದ ಜನರಿಗೆ ಹೊರೆಯಾಗದೆ ತನ್ನ ಆಡಳಿತ ಅನುಭವ ಬಳಸಿಕೊಂಡು ಸರಿ ದಾರಿಗೆ ತೂಗಬಲ್ಲ ಏಕೈಕ ನಾಯಕ ಸಿದ್ದರಾಮಯ್ಯ.
ನಮ್ಮಂತ ಲಕ್ಷಾಂತರ ಕನ್ನಡದ ಯುವ ಮನಸುಗಳು ಸಾಹಿತಿಗಳು, ಪ್ರಗತಿಪರರು ,ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಹದಾಸೆಯಿಂದ ಕಾಂಗ್ರೆಸ್ ಪರ ಕೆಲಸ ಮಾಡಿದ್ದು
 ಶಹಾಪುರ ಕ್ಷೇತ್ರದಿಂದ 5 ನೇ ಭಾರಿಗೆ ಶಾಸಕರಾಗಿ ಆಯ್ಕೆಯಾದ ಹಿರಿಯರು ಅನುಭವಿ ರಾಜಕಾರಣಿಯಾದ ಎಲ್ಲಾ ವರ್ಗದ ಹಿತ ಕಾಪಾಡುವ  ಶರಣಬಸಪ್ಪಗೌಡ ದರ್ಶನಪುರವರನ್ನು ಸಂಪುಟದರ್ಜೆ ಸಚಿವರನ್ನಾಗಿ ಮಾಡಿ  ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ ಮಾಡಬೇಕೆಂದು ಎಐಸಿಸಿ ಅಧ್ಯಕ್ಷರಾದ
ಮಲ್ಲಿಕಾರ್ಜುನ ಖರ್ಗೆಯವರನ್ನು ಹಾಗೂ ಹೈಕಮಾಂಡ್ ಗೆ ಮನವಿ ಮಾಡಿದರು.
.

About The Author