ಶಹಾಪೂರ ಮತಕ್ಷೇತ್ರ : ಅಭಿವೃದ್ಧಿಗೆ ಇನ್ನೊಂದು ಹೆಸರೆ ಶರಣಬಸಪ್ಪಗೌಡ ದರ್ಶನಾಪುರ

ಬಸವರಾಜ ಅತ್ನೂರು 
 ಸಿದ್ದರಾಮಯ್ಯ ಬ್ರಿಗೇಡ್ ಜಿಲ್ಲಾಧ್ಯಕ್ಷರು ಯಾದಗಿರಿ 
****
ಶಹಾಪುರ : 2023ರ ವಿಧಾನಸಭಾ ಚುನಾವಣೆಯಲ್ಲಿ ನನ್ನ ಅಭಿವೃದ್ಧಿ ನೋಡಿ ಮತ ಕೊಡಿ ಎನ್ನುವವರು ಶರಣಬಸಪ್ಪಗೌಡ ದರ್ಶನಪುರ ಮಾತ್ರ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಇತರ ವಿಷಯಗಳಿಗೆ ಹೋಲಿಸಿದರೆ ಕ್ಷೇತ್ರದ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿದ ಪ್ರತಿ ಹಳ್ಳಿಯಲ್ಲಿ ನನ್ನ ಕೆಲಸ ನೋಡಿ ಮತ ಕೊಡಿ ಎಂದು ಹೇಳುತ್ತಿದ್ದಾರೆ. ಕ್ಷೇತ್ರದ ಪ್ರತಿ ಹಳ್ಳಿಗಳಲ್ಲಿ ದರ್ಶನಾಪುರವರ ಅಭಿವೃದ್ಧಿ ಕಾಮಗಾರಿಗಳು, ಶಾಸಕರಾಗಿದ್ದುಕೊಂಡು ಇಷ್ಟೊಂದು ಕಾರ್ಯ ಮಾಡಿದ್ದಾರೆ ಎಂದರೆ ಆಶ್ಚರ್ಯದ ವಿಷಯ.
ವಿರೋಧ ಪಕ್ಷದಲ್ಲಿರುವೆ ನಾನೇನು ಮಾಡಲಿ ಕ್ಷೇತ್ರಕ್ಕೆ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ನನಗೆ ಅನುದಾನ ಸಾಕಷ್ಟು ಕೊಟ್ಟಿಲ್ಲ ಎಂದು ಕಾರಣ ಹೇಳಿ ಹಿಂದೆ ಸರಿಯಬಹುದಾಗಿತ್ತು. ಆದರೆ ಅದನ್ನು ಲೆಕ್ಕಿಸದೆ ನನ್ನ ಕ್ಷೇತ್ರದ ಜನತೆಗೆ ಮೋಸ ಮಾಡಬಾರದು ಎನ್ನುವ ದೃಷ್ಟಿಯಿಂದ ಎಲ್ಲಿಯೂ ಕೂಡ ಸುಳ್ಳು ಹೇಳಲಿಲ್ಲ. ಇದೇ ನಾಯಕತ್ವದ ಗತ್ತು.
ಕಾಂಗ್ರೆಸ್ ಶಾಸಕನಾಗಿ ಅಧಿಕಾರದಲ್ಲಿರುವಾಗ ಬಿಜೆಪಿ ಪಕ್ಷದಿಂದ ಅನುದಾನ ತಂದಿರುವುದೇ ದೊಡ್ಡ ಸಾಧನೆ. ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ತನ್ನ ಕಾರ್ಯಕರ್ತರಿಗೂ ಮೋಸ ಮಾಡದೆ ಪಕ್ಷಕ್ಕಾಗಿ ಸೇವಿ ಸಲ್ಲಿಸಲು ಸಲಹೆ ನೀಡಿದ್ದಾರೆ. ಯಾರು ಕೂಡ ದರ್ಶನಾಪುರ ಅವರಿಂದ ಕಾರ್ಯಕರ್ತರಿಗೆ ನಿರಾಸೆಯಾಗಿಲ್ಲ. ಕ್ಷೇತ್ರದ ಅನುದಾನಕ್ಕಾಗಿ ಕಾಡಿಬೇಡಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ.ಅದನ್ನು ನೋಡಿ ನನಗೆ ಮತ ಕೊಡಿ. ಇನ್ನೊಂದು ಸಾರಿ ನಿಮ್ಮ ಸೇವೆ ಮಾಡುವ ಭಾಗ್ಯ ನನ್ನದಾಗಲಿ ಎಂದು ಕ್ಷೇತ್ರದ ಗ್ರಾಮಗಳಲ್ಲಿ ಕೇಳುತ್ತಿರುವುದು ದರ್ಶನಾಪುರವರು.
ಪ್ರಸ್ತಾವನೆ ಸಲ್ಲಿಸಬಹುದು. ಅದಕ್ಕೆ ಅನುದಾನ ಕೊಡಬೇಕಲ್ಲ. ಆ ಕೆಲಸ ದರ್ಶನಪೂರ ಮಾಡಿದ್ದಾರೆ. ಪ್ರತಿ ವಲಯಗಳಲ್ಲಿ ಅನುದಾನ ತಂದು ಕೆಲಸ ಮಾಡಿಸಿದ್ದಾರೆ. ಇದಕ್ಕಿಂತ ದೊಡ್ಡದೇನು ಬೇಕು. ಕ್ಷೇತ್ರದ ಜೀವಾಳವೆ ಶರಣಬಸಪ್ಪಗೌಡ ದರ್ಶನಪುರ.ಮತ್ತೊಮ್ಮೆ ಅಭಿವೃದ್ಧಿಗಾಗಿ ಶರಣಬಸಪ್ಪಗೌಡ ದರ್ಶನಪುರ

About The Author