ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ – ಈಶ್ವರಪ್ಪ

ಶಹಾಪುರ : 2023 ನೇ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಜಯಶಾಲಿಯಾಗಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಶತಸಿದ್ಧ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ತಾಲೂಕಿನ ಸಗರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿಯಾದ ಅಮೀನ್ ರೆಡ್ಡಿ ಪಾಟೀಲ್ ಯಾಳಗಿ ಅವರ ವರ ಪ್ರಚಾರದ ಬಹಿರಂಗ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮಾತಿಗೆ ಮಾರು ಹೋಗದೆ ಈ ಬಾರಿ ಬಿಜೆಪಿ ಭರ್ತಿ ಅಮೀನರೆಡ್ಡಿ ಪಾಟೀಲ್ ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಬೇಕು ಎಂದು ಕಳಕಳಿಯಿಂದ ವಿನಂತಿಸಿಕೊಂಡರು .
ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡರಾದ ತಿರುಪತಿ ಹತ್ತಿಕಟಗಿ ಅವರು ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ವಂತ ಎರಡು ಎಕರೆ ಜಮೀನನ್ನು ದಾನವಾಗಿ ನೀಡಿದ್ದಕ್ಕಾಗಿ ಅವರನ್ನು ಕೊಂಡಾಡಿ ಗುಣಗಾನ ಮಾಡಿ ಈ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಿ ಸತ್ಕರಿಸಿದರು.
ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಅಮೀನ್ ರೆಡ್ಡಿ ಪಾಟೀಲ್ ಮಾತನಾಡಿ ನಮ್ಮ ಮೇಲೆ ವಿಶ್ವಾಸವಿಟ್ಟು ಈ ಬಾರಿ ಆಶೀರ್ವಾದ ಮಾಡಬೇಕು,ನೀವಿಟ್ಟ ವಿಶ್ವಾಸಕ್ಕೆ ಯಾವುದೆ ಪ್ರೀತಿಯಿಂದ ಧಕ್ಕೆ  ಬಾರದಂತೆ ನೋಡಿಕೊಳ್ಳುತ್ತೇನೆ ಎಂದು ಈ ಸಂದರ್ಭದಲ್ಲಿ ಕೈಮುಗಿದು ಮತದಾರ ಬಾಂಧವರಲ್ಲಿ ವಿನಂತಿಸಿಕೊಂಡರು.
ಸಂದರ್ಭದಲ್ಲಿ ರಾಜಸ್ಥಾನದ ರಾಜ್ಯಸಭೆಯ ಸದಸ್ಯರಾದ ನಾರಾಯಣ್ ಲಾಲ್ ಪಾಂಚರ್ಯ ಹಿರಿಯ ಮುಖಂಡರಾದ ಡಾ: ಚಂದ್ರಶೇಖರ್ ಸುಬೇದಾರ, ಬಸವರಾಜಪ್ಪಗೌಡ ವಿಭೂತಿಹಳಿ,ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ,ತಿರುಪತಿ ಸೇರಿ,ಕರಣ್  ಸುಬೇದಾರ್,ಎಲ್ಲಯ್ಯ ಮಲ್ಲಿಕಾರ್ಜುನ್ ಕಂದುಕುರ್ ರಾಜಶೇಖರ್ ಗೂಗಲ್ ಹಾಗೂ ಇತರರು ಹಾಜರಿದ್ದರು.

About The Author