ಮುಡಬೋಳ ಗ್ರಾಮದಲ್ಲಿ ವಿವಿಧ ಪಕ್ಷ ತೊರೆದು ಬಿಜೆಪಿ ಸೇರ್ಪಡೆ

ಶಹಾಪುರ : ತಾಲೂಕಿನ ಮುಡಬೂಳ ಗ್ರಾಮಕ್ಕೆ ಶಹಾಪುರ ಮತಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿಯಾದ ಅಮೀನರಡ್ಡಿ ಯಾಳಗಿ ಅವರು ಹಿರಿಯ ಮುಖಂಡರಾದ ಡಾ|| ಚಂದ್ರಶೇಖರ ಸುಬೇದಾರ  ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಿದರು. ‌ ಮುಡಬೂಳ ಗ್ರಾಮದ   ಅಶೋಮರಾವ್ ಕುಲಕರ್ಣಿ, ಶರಣಪ್ಪ ಬಬಲಾದಿ, ನಿಂಗಣ್ಣ ಬಬಲಾದಿ, ಶರಣಪ್ಪ ಹವಲ್ದಾರ, ಭೀಮಣ್ಣ ನಾಯ್ಕೋಡಿ, ಹಾಗೂ ಇತರ ಕಾರ್ಯಕರ್ತರು ವಿವಿಧ ಪಕ್ಷಗಳನ್ನು ತೊರೆದು ಬಿ‌ ಜೆ‌ ಪಿ ಪಕ್ಷಕ್ಕೆ ಸೇರ್ಪಡೆಯಾದರು.
 
ಈ ಸಂದರ್ಭದಲ್ಲಿ  ಗ್ರಾಮೀಣ‌ ಮಂಡಲ‌ ಅಧ್ಯಕ್ಷರಾದ ರಾಜುಗೌಡ ಉಕ್ಕಿನಾಳ  ಬಸವರಾಜಪ್ಪಗೌಡ ವಿಭೂತಿಹಳ್ಳಿ  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ಜಿಲ್ಲಾ ಉಪಾಧ್ಯಕ್ಷರಾದ  ಮಲ್ಲಿಕಾರ್ಜುನ ಕಂದಕೂರ, ರಾಜಶೇಖರ ಗೂಗಲ್,  ಕರಣ್ ಸುಬೇದಾರ, ಗ್ರಾಮದ‌ ಪ್ರಮುಖರಾದ ಗೋಪಯ್ಯ ಸಾಹು ಕಸ್ತೂರಿ, ಮಹಾಂತೇಶ ಸಾಹು ಚನ್ನಪಟ್ಟಣ, ಮಲ್ಲಿಕಾರ್ಜುನ ಅಂಗಡಿ ಹಣಮಂತ ಗುರಿಕಾರ ಇತರ ಮುಖಂಡರು  ಉಪಸ್ಥಿತರಿದ್ದರು.

About The Author