ಶಹಾಪುರ ಕ್ಷೇತ್ರ : ಮೂವರು ಪ್ರಬಲ ಆಕಾಂಕ್ಷಿಗಳು : ಯಾರಿಗೆ ಸಿಗುತ್ತೆ ಬಿಜೆಪಿ ಟಿಕೆಟ್ !

ಶಹಾಪೂರ : ಬಿಜೆಪಿ ಹೈಕಮಾಂಡ್ ಒಂದು ಕ್ಷೇತ್ರದಿಂದ ಮೂರು ಜನರನ್ನು ಆಯ್ಕೆ ಮಾಡಿ ಕಳಿಸಿಕೊಡಿ ಎಂದು ಹೇಳಿದ್ದು! ಪ್ರಸ್ತುತ ಶಹಾಪುರ ಮತ ಕ್ಷೇತ್ರದಿಂದ ಡಾ.ಚಂದ್ರಶೇಖರ ಸುಬೇದಾರ,ಮಾಜಿ ಶಾಸಕರಾದ ಗುರುಪಾಟೀಲ ಶಿರವಾಳ,ಯುವ ಮುಖಂಡರಾದ ಅಮ್ಮಿನರೆಡ್ಡಿ ಯಾಳಗಿ ಹೆಸರುಗಳು ಹೈಕಮಾಂಡಿಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಲಾಗಿದ್ದು ! ಮೂರು ಜನ ಬಿಜೆಪಿಯ ಪ್ರಭಲ ಅಭ್ಯರ್ಥಿಗಳಾಗಿದ್ದಾರೆ.ಆದರೆ ಹೈಕಮಾಂಡ್ ಯಾರಿಗೆ ಮಣೆಹಾಕಲಿದೆ ಎಂದು ಕಾದು ನೋಡಬೇಕಿದೆ.

ಗುರುಪಾಟೀಲ್ ಶಿರವಾಳ ಮಾಜಿ ಶಾಸಕರು

ಮಾಜಿ ಶಾಸಕರಾದ ಗುರು ಪಾಟೀಲ್ ಶಿರವಾಳ ರವರು ಕಳೆದ ಚುನಾವಣೆಯಲ್ಲಿ 2018ರಲ್ಲಿ ಶಾಸಕರಾಗಿದ್ದು, ಆ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರ ತಂದೆಯವರಾದ ಶಿವಶೇಖರಪ್ಪಗೌಡ ಶಿರವಾಳರವರ ಜನಹಿತ ಕಾರ್ಯಗಳನ್ನು ಅವರಿಗೆ ಸಾತ್ ನೀಡಬಹುದು. ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಗುರು ಪಾಟೀಲ್ ಶಿರವಾಳ್ ರವರು ಯಡಿಯೂರಪ್ಪನವರ ಆಪ್ತರಾಗಿದ್ದಾರೆ.

ಡಾ.ಚಂದ್ರಶೇಖರ ಸುಬೇದಾರ ಖ್ಯಾತ ವೈದ್ಯರು

ಡಾ.ಚಂದ್ರಶೇಖರ ಸುಬೇದಾರ ಈಗಾಗಲೇ ಕ್ಷೇತ್ರದಲ್ಲಿ ಹಲವಾರು ಬಡವರ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮತದಾರರ ಮನ ಗೆಲ್ಲುವಲ್ಲಿ ಸಫಲರಾಗಿದ್ದಾರೆ. ಆರೋಗ್ಯ ಶಿಬಿರ ಉಚಿತ ಅಂಬುಲೆನ್ಸ್ ಸೇವೆ ಮತ್ತು ಬಡ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆಯನ್ನು ಕಲಬುರ್ಗಿ ಮತ್ತು ಶಹಪುರದ ಸುಬೇದಾರ ಆಸ್ಪತ್ರೆಯಲ್ಲಿ ಮಾಡಿಸಿದ್ದು ಇದು ಜನರ ಜನ ಅಭಿಪ್ರಾಯಕ್ಕೆ ಉತ್ತಮ ಉದಾಹರಣೆಯಾಗಿದೆ.
ವೈಧ್ಯರಾಗಿ ಜನಪರ ಕಾರ್ಯಕ್ರಮಗಳನ್ನು ಮಾಡಿದ್ದು, ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರತಿ ಬೂತ್ ಮಟ್ಟದಲ್ಲಿ ಪ್ರತಿ ಮನೆಗೆ ಭೇಟಿ ನೀಡಿ ಸರಕಾರದ ಸಾಧನೆಗಳ ಬಗ್ಗೆ ಮನವರಿಕೆ ಮಾಡಿದ್ದಾರೆ.

ಸರ್ವೆ ವರದಿ

ಹರಿಯಾಣ ರಾಜ್ಯದ ಗುರ್ಗಾಂವ್ ನಾ ಖಾಸಗಿ ಸಂಸ್ಥೆಯಾದ ಲೀಡ್ ಟೇಕ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ರವರು ಶಹಪುರ ಕ್ಷೇತ್ರದಲ್ಲಿ ದಿ.ಪೆಬ್ರವರಿ 14 ರಿಂದ ಮಾರ್ಚ್ 20, 2023 ರವರೆಗೆ ಮನೆ ಮನೆಗೆ ಪ್ರಚಾರವನ್ನು ನಡೆಸಿದ್ದು ಈ ಕ್ಯಾಂಪೈನ್ ನಲ್ಲಿ 33076 ಮನೆಗಳಿಗೆ ಭೇಟಿ ನೀಡಿ 1,40,324 ಮತದಾರರನ್ನು ಸಂಪರ್ಕಿಸಿದ ಸರ್ವೆಯಲ್ಲಿ ಡಾ. ಚಂದ್ರಶೇಖರ ಸುಬೇದಾರ ಅವರು ಶೇ. 69.63 ರಷ್ಟು ಜನರ ಬಳಿ ತಲುಪಿದ್ದಾರೆ ಎಂದು ಹೇಳಲಾಗಿದೆ. ಮುಂದಿನ ಶಹಾಪುರ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದು ಎನ್ನುವ ಸರ್ವೆ ಬಿಜೆಪಿಯ ಹೈಕಮಾಂಡ್ಗೆ ತಲುಪಿಸಿದ್ದಾರೆ ಎಂದು ಹೇಳಲಾಗಿದೆ. ಹೈಕಮಾಂಡ್ ಜನಪರ ಕಾರ್ಯಗಳನ್ನು ಮೆಚ್ಚಿ ಟಿಕೆಟ್ ಕೊಟ್ಟರೆ ಜನರ ಸೇವೆ ಮಾಡಲು ಅಡಿಯಾಗುತ್ತೇನೆ ಎನ್ನುತ್ತಾರೆ ಡಾ.ಚಂದ್ರಶೇಖರ ಸುಭೇದಾರ.
ಅಮ್ಮಿನರೆಡ್ಡಿ ಯಾಳಗಿ ಯುವ ಮುಖಂಡ
ಅಮಿನರೆಡ್ಡಿ ಯಾಳಗಿ ಯುವ ಬಿಜೆಪಿ ಮುಖಂಡರಾಗಿದ್ದು, 2018ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಶಹಾಪುರ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರು. 20 ಸಾವಿರಕ್ಕೂ ಹೆಚ್ಚು ಮತಗಳ ಪಡೆದ ಅಮ್ಮಿನ್ ರೆಡ್ಡಿ ಯಾಳಗಿ ರವರು ಕ್ಷೇತ್ರದಲ್ಲಿ ಹಲವಾರು ಜನ ಪರ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಕರೋನಾ ಸಂದರ್ಭದಲ್ಲಿ ಪ್ರತಿ ಮನೆಗೆ ಉಚಿತ ಆಹಾರದ ಕಿಟ್ ಗಳನ್ನು ಉಚಿತವಾಗಿ ಒದಗಿಸಿ ಕೊಟ್ಟಿದ್ದಾರೆ. ಪ್ರಸ್ತುತ ಬಿಜೆಪಿ ಪಕ್ಷದಲ್ಲಿದ್ದು ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ.ಬಿಜೆಪಿ ಹೈಕಮಾಂಡ್ ಈ ಮೂರು ಜನರಲ್ಲಿ ಯಾರಿಗೆ ಟಿಕೆಟ್ ಕೊಡುತ್ತದೆಯೋ ಕಾದು ನೋಡಬೇಕಿದೆ !.

About The Author