ಕಾಂಗ್ರೆಸ್ ಟಿಕೆಟ್ ಡಾ. ಮಾಲಕರೆಡ್ಡಿ ಪುತ್ರಿಗೆ ನೀಡುವಂತೆ ಮನವಿ

ಯಾದಗಿರಿ :ಯಾದಗಿರಿ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಸಚಿವರಾಗಿ ಕೆಲಸ ಮಾಡಿರುವ ಮಾಜಿ ಸಚಿವರಾದ ಡಾ. ಮಾಲಕರೆಡ್ಡಿಯವರ ಪುತ್ರಿ ಡಾ. ಅನುರಾಗರವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವಂತೆ ಕ್ಷೇತ್ರದ ಕಾರ್ಯಕರ್ತರಾದ ಮರಿಗೌಡ ಚಿಕ್ಕ ಮೇಟಿ,ಮರಿಗೌಡ ಕಲ್ಮಲ, ಬಸವರಾಜ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.

ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಪೈಪೋಟಿ ನೀಡುವವರು ಮಾಲಕರೆಡ್ಡಿ ಕುಟುಂಬದವರು ಮಾತ್ರ.50 ವರ್ಷಕ್ಕೂ ಅಧಿಕ ದಿನಗಳಲ್ಲಿ ರಾಜಕೀಯದಲ್ಲಿ ಜನ ಸೇವೆ ಮಾಡಿರುವ ಮಾಲಕರೆಡ್ಡಿಯವರು.ಪ್ರತಿ ಗ್ರಾಮದಲ್ಲಿಯೂ ಅವರ ಅಭಿಮಾನಿಗಳಿದ್ದು, ಹಲವಾರು ಕಾರ್ಯಕರ್ತರು ಇಂದಿಗೂ ಅವರ ಸಂಪರ್ಕದಲ್ಲಿದ್ದಾರೆ.

ಇಂದಿಗೂ ಕೂಡ ಮಾಲ್ಕರೆಡ್ಡಿಯವರು ಕಾರ್ಯಕರ್ತರನ್ನು ಗುರುತಿಸುತ್ತಾರೆ. ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಪ್ರತಿ ಗ್ರಾಮದಲ್ಲಿ ಕುಡಿಯುವ ನೀರು, ವಸತಿ ಸೌಲಭ್ಯ, ಸುವರ್ಣ ಗ್ರಾಮ ಯೋಜನೆ, ರಸ್ತೆ ನಿರ್ಮಾಣ ಸೇರಿದಂತೆ ಹಲವಾರು ಕಾರ್ಯಗಳು ಮಾಡಿದ್ದು, ಕ್ಷೇತ್ರದಲ್ಲಿ ಅವರ ಪರಿಚಯ ಬಹಳಷ್ಟಿದೆ. ಪ್ರತಿ ಬೂತ್ ಮಟ್ಟದಲ್ಲಿಯೂ ಕಾರ್ಯಕರ್ತರನ್ನು ಬೆಳೆಸಿರುವ ಡಾ ಮಾಲ್ಕರೆಡ್ಡಿ ಅವರು ಇಂದಿನವರೆಗೂ ಕೂಡ ಕಾರ್ಯಕರ್ತರನ್ನು ಗುರುತಿಸುತ್ತಾರೆ.

ಕಾಂಗ್ರೆಸ್ ಪಕ್ಷದಲ್ಲಿ ಇತರ ನಾಯಕರಿಗಿಂತಲೂ ಅತಿ ಹೆಚ್ಚು ಜನ ಕಾರ್ಯಕರ್ತರನ್ನು ಹೊಂದಿರುವವರು ಡಾ. ಮಾಲ್ಕರೆಡಿಯವರು ಪರಿಚಿತರು. ಎಲ್ಲಾ ಸಮುದಾಯದ ಜನರನ್ನು ಸಯ್ಯಮದಿಂಧ ಮಾತನಾಡಿಸುವ ಡಾ.ಮಾಲಕರೆಡ್ಡಿಯವರ ಪುತ್ರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟರೆ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ ಎಂದು ಹೇಳಿದರು.

About The Author