ಜಿಲ್ಲಾ ನಿರ್ದೇಶಕರಾಗಿ ಮಾಳಪ್ಪ ಸುಂಕದ ಆಯ್ಕೆ

ಶಹಪುರ:-ಯಾದಗಿರಿ ಜಿಲ್ಲಾ ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಕೆಂಭಾವಿ ವ್ಯಾಪ್ತಿಯಿಂದ ಮಾಳಪ್ಪ ಸುಂಕದ ಅವರನ್ನು ಜಿಲ್ಲಾ ಪ್ರದೇಶ ಕುರುಬರ ಸಂಘಕ್ಕೆ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದ್ದು, ಸುರಪುರ ತಾಲೂಕು ಕುರುಬ ಸಮಾಜದ ಎಲ್ಲಾ ಮುಖಂಡರಿಗೆ ಮಾಳಪ್ಪ ಸುಂಕದ ಧನ್ಯವಾದ ತಿಳಿಸಿದರು.ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರ ನೇಮಕ ಕುರಿತಂತೆ ನಿರ್ದೇಶಕರ ಆಯ್ಕೆ ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಸೋಮವಾರದಂದು ಸುರಪುರ ಪ್ರವಾಸಿ ಮಂದಿರದಲ್ಲಿ ನಡೆದ ಸಮಾಜದ ಮುಖಂಡರ ಸಭೆಯಲ್ಲಿ  ನನ್ನನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

 

About The Author