ಮಹಾರಾಜ ದಿಗ್ಗಿ ಜನ್ಮದಿನಾಚರಣೆ;ಹಣ್ಣು ಹಂಫಲ ವಿತರಣೆ

ಶಹಾಪುರ:-ಮಹಾರಾಜ ದಿಗ್ಗಿ 42 ನೇ ಜನ್ಮದಿನಾಚರಣೆ ನಿಮಿತ್ತ ಇಂದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೊಗಿಗಳಿಗೆ, ಗರ್ಭಿಣಿ ಸ್ತ್ರೀಯರಿಗೆ ಹಣ್ಣು ಹಂಪಲ ವಿತರಿಸಲಾಯಿತು.ರಾಜ್ಯದಲ್ಲಿ ಅನಾವೃಷ್ಟಿ ಯಿಂದ ರೈತರು ಬಡವರು ತತ್ತರಿಸಿದ್ದಾರೆ ಇಂತಹ ಸಂದರ್ಭದಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅರಿತ ಅಭಿಮಾನಿಗಳು ಆಚರಿಸಿದರು.

ಮಹಾರಾಜ ದಿಗ್ಗಿ ಬಡಕುಟುಂಬ ದಲ್ಲಿ ಜನಿಸಿ ಬೆಂಗಳೂರಿಗೆ ದುಡಿಯಲು ಹೋಗಿ ಇಂದು ಸ್ವಂತ ಸಾಮರ್ಥ್ಯದಿಂದ ಜನ ನಾಯಕರಾಗಿ ಬೆಳೆದಿದ್ದಾರೆ ಎನ್ನುವುದು ಸಂತಸ.ಬಡ ವಿಧ್ಯಾರ್ಥಿಗಳಿಗೆ ಸಹಾಯ ಧನ ಸೇರಿದಂತೆ ಹಲವಾರು ಜನರಿಗೆ ಸಹಾಯ ಹಸ್ತ ಚಾಚಿ ಜನನಾಯಕರೆಂದು ಎನಿಸಿಕೊಂಡಿದ್ದಾರೆ.ಈ ಸಂದರ್ಭದಲ್ಲಿ ಶಹಾಪುರ ತಾಲೂಕು ಮಹಾರಾಜ ದಿಗ್ಗಿ ಅಭಿಮಾನಿಗಳ ಸಂಘದ ಎಲ್ಲ ಸದಸ್ಯರು ಮತ್ತು ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಸದಸ್ಯರು ಸೇರಿದಂತೆ ಇತರರು ಇದ್ದರು.

 

About The Author