ನಾಳೆ ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳವರ 12 ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಶಿಷ್ಯರ ಗಾನ ನುಡಿನಮನ

ಶಹಾಪುರ:ತಾಲೂಕಿನ ಪಕ್ಕಿರೇಶ್ವರ ಮಠದ ಬಸವ ಅನುಭವ ಮಂಟಪದಲ್ಲಿ ನಾಳೆ ಸಾಯಂಕಾಲ 6:00 ಗಂಟೆಗೆ ಪದ್ಮಭೂಷಣ ಗಾನಯೋಗಿ ಡಾ. ಪಂಡಿತ್ ಪುಟ್ಟರಾಜ ಗವಾಯಿ ಕವಿ ಗವಾಯಿಗಳವರ 12ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಶಿಷ್ಯರ ಗಾನ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುಟ್ಟರಾಜ ಗವಾಯಿಗಳ ಶಿಷ್ಯ ವೃಂದದವರು ಪ್ರಕಟಣೆಯಲ್ಲಿ ತಿಳಿಸಿದರು.

ನಗರದ ಫಕೀರೇಶ್ವರ ಮಠದ ಪೂಜ್ಯರಾದ ಗುರುಪಾದ ಮಹಾಸ್ವಾಮಿಗಳು ಸಾನಿಧ್ಯವಹಿಸಿಕೊಳ್ಳಲಿದ್ದು,ಚರಬಸವೇಶ್ವರ ಸಂಸ್ಥಾನ ಮಠದ ಪೂಜ್ಯರಾದ ಬಸವಯ್ಯ ಶರಣರು ಉದ್ಘಾಟಕರಾಗಿ,ವಿಶ್ವಕರ್ಮ ಏಕದಂಡಗಿ ಮಠದ ಸರಸ್ವತಿ ಪೀಠದ ಪೂಜ್ಯಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಮತ್ತು ಚೆನ್ನಯ್ಯ ಹಿರೇಮಠ ಆರಕ್ಷಕ ವೃತ್ತ ನಿರೀಕ್ಷಕರು,ಡಾ.ಬಸವರಾಜ ಹಿಜೇರಿ ಆಡಳಿತಾಧಿಕಾರಿಗಳು ಸ್ಪಂದನ ಆಸ್ಪತ್ರೆ,ಬಾಬಾ ಪಟೇಲ್ ನಗರಸಭೆ ಸದಸ್ಯರು,ಅಮರೇಶ ಗವಾಯಿಗಳು ಶಳ್ಳಗಿ ಭೀಮರಾಯನ ಗುಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.ಈ ನುಡಿನಮನ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲು ವಿನಂತಿಸಿಕೊಂಡಿದ್ದಾರೆ.

 

About The Author