ಶಹಾಪುರ : ಆಗಸ್ಟ್ 8 ರಿಂದ 20 ರವರೆಗೆ ಸಹಜ ಸ್ಥಿತಿ ಯೋಗ ಶಿಬಿರ

ಶಹಾಪುರ: ತಾಲೂಕಿನ ಶ್ರೀ ಚರಬಸವೇಶ್ವರ ಕಲ್ಯಾಣ ಮಂಟಪ ಗದ್ದುಗೆಯಲ್ಲಿ ಆಗಸ್ಟ್ 8 ರಿಂದ ಆಗಸ್ಟ್ 20 ರವರೆಗೆ 13 ದಿನಗಳ ಕಾಲ ಪೂಜ್ಯ ಶ್ರೀ ಗುರುದತ್ತ ಗುರೂಜಿಯವರಿಂದ ಸಹಜ ಸ್ಥಿತಿ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೇಂದ್ರ ಸಂಚಾಲಕರಾದ ವೀರೇಶ್ ಉಳ್ಳಿ ಪ್ರಕಟಣೆಯಲ್ಲಿ ತಿಳಿಸಿದರು.

ಯೋಗ ಶಿಬಿರವು ದಿನಂಪ್ರತಿ ಸಾಯಂಕಾಲ 6:00 ಗಂಟೆ ಯಿಂದ ರಾತ್ರಿ 8.30 ರವರೆಗೆ ನಡೆಯಲಿದೆ ಎಂದು ತಿಳಿಸಿದರು.

ಪ್ರಾಣಾಯಾಮ ಧ್ಯಾನ ಭಕ್ತಿ ಕರ್ಮಯೋಗಗಳ ಸಮ್ಮಿಶ್ರ ಶಿಬಿರವಾಗಿದ್ದು ಇದೊಂದು ಮಹಾ ಸತ್ಸಂಗವಾಗಿದೆ.ದೀರ್ಘ ಕಾಯಿಲೆಗಳಾದ ಅಸ್ತಮಾ ಮಧುಮೇಹ ರಕ್ತದೊತ್ತಡ ಅರ್ಧ ತಲೆನೋವು ಸಂಧಿವಾತ ಮಾನಸಿಕ ಅಸ್ವಸ್ಥತೆಯಿಂದ ಮುಕ್ತರಾಗುವಿರಿ ಎಂದು ತಿಳಿಸಿದರು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:8197876680

Leave a Reply

Your email address will not be published. Required fields are marked *