ಶಹಾಪುರ:ಶಹಾಪುರ ತಹಸಿಲ್ ಕಚೇರಿಯ ಅಭಿಲೇಖಾಲಯ ಅಧಿಕಾರಿ ಬಲಭೀಮ ಮಾಹಿತಿ ಕೇಳಲು ಹೋದ ಪತ್ರಕರ್ತರಿಗೆ ಹೊರ ಹಾಕಿ ಗುಂಡಾ ವರ್ತನೆ ತೋರಿದ ಘಟನೆ ಸೋಮವಾರ ನಡೆದಿದೆ.ತಹಸಿಲ್ ಕಚೇರಿಗೆ ವರದಿಗಾಗಿ ಮಾಹಿತಿ ಕೇಳಲು ಹೋದಾಗ ಏಕವಚನದಲ್ಲಿ ನಿಂದಿಸಿ, ಬೆದರಿಕೆ ಹಾಕಿ ಪೆÇಲೀಸರಿಗೆ ತಿಳಿಸಿ ಕೇಸ್ ದಾಖಲಿಸುತ್ತೇವೆ ಧಮ್ಕಿ ಹಾಕುತ್ತಿದ್ದಾರೆ. ಇತ್ತ ಅಧಿಕಾರಿಗೆ ಗೊತ್ತಿರುವವರು ಬಂದರೆ ಒಳಗಡೆ ಕರೆದು ವಿಚಾರಿಸಿ ದಾಖಲೆ ನೀಡುವರು ಆದರೆ ಗ್ರಾಮೀಣ ಪ್ರದೇಶಗಳಿಂದ ಬರುವವರಿಗೆ ಸ್ಪಂದನೆ ನೀಡುತ್ತಿಲ್ಲ. ಕಳೆದ ಎರಡು ವಾರದಿಂದ ದಾಖಲಾತಿಗಾಗಿ ಅಲೆಯುತ್ತಿದ್ದು ನಮಗೆ ಬೆಳಿಗ್ಗೆ ಸಾಯಂಕಾಲ ಬರಲು ಹೇಳಿ ಸತಾಯಿಸುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ಅಂಗವಿಕಲರು ತಮ್ಮ ನೋವು ಹೊರಹಾಕಿದರು.
ಪ್ರಸ್ತುತ ವಿದ್ಯಮಾನ, ಸರ್ಕಾರದ ಯೋಜನೆ ಸೇರಿದಂತೆ ಎಲ್ಲ ಮಾಹಿತಿಯನ್ನು ಜನರಿಗೆ ತಿಳಿಸಿ, ಜನರ ಸಮಸ್ಯೆಯನ್ನು ಸರ್ಕಾರಕ್ಕೆ ಮನವರಿಸಿ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಶ್ರಮಿಸುವ ವರದಿಗಾರರಿಗೆ ನೋವುಂಟು ಮಾಡುವುದು ಖಂಡನೀಯ. ಇದು ಪಾರದರ್ಶಕ ಆಡಳಿತದ ಕ್ರಮವಲ್ಲ ಕೂಡಲೇ ತಹಸೀಲ್ದಾರರು ಇಂತಹ ದುರ್ವಾಸನೆ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ದಂಡಾಧಿಕಾರಿ ಸ್ಥಾನಕ್ಕೆ ಮುಂದೊಂದು ದಿನ ಕಳಂಕ ಬರುವುದಂತು ನಿಚ್ಚಿತ ಸಾರ್ವಜನಿಕರ ವಾದವಾಗಿದೆ.