|
ಶಹಾಪುರ.ಅಂಗನವಾಡಿ ಕಾರ್ಯಕರ್ತೆಯರು ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಸಿಡಿಪಿಓ ಕಚೇರಿ ಎದುರು ಜುಲೈ13ಕ್ಕೆ ಪ್ರತಿಭಟನೆ ನಡೆಸಿದ್ದರು. ಮುಂಬಡ್ತಿ ಹಾಗೂ ವರ್ಗಾವಣೆಗೆ ಒತ್ತಾಯಿಸಿ ಸಿಡಿಪಿಓ ವಿರುದ್ಧ ಧರಣಿ ಮಾಡಿದ್ದರು. ಈ ವೇಳೆ ಮಾಜಿ ಸಚಿವ ಶಾಸಕ ಎಚ್ ಡಿ ರೇವಣ್ಣ ಪ್ರತಿಭಟನಾ ಸ್ಥಳಕ್ಕೆ ಬಂದು ಪ್ರತಿಭಟನಾ ನಿರತ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿ, ಮಹಿಳೆಯರನ್ನುವಾದನ್ನು ನೋಡದೆ ಏಕವಚನದಲ್ಲಿ ನಿಂದಿಸಿರಿವ ಮಾಜಿ ಸಚಿವ ಶಾಸಕ ಎಚ್ ಡಿ ರೇವಣ್ಣ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಮತ್ತು ಸಿಐಟಿಯು ಶಹಾಪುರ ತಾಲೂಕ ಸಮಿತಿ ನೇತೃತ್ವದಲ್ಲಿ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಧುರಾಜ್ ಕೂಡ್ಲಿಗಿ ಅವರ ಮೂಲಕ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅಂಗನವಾಡಿ ನೌಕರರ ರಾಜ್ಯ ಕಾರ್ಯದರ್ಶಿ ಸುನಂದ ಹೆಚ್ ಅವರು ಇದೆ ವೇಳೆ ಮಾತನಾಡಿದ ಅಂಗನವಾಡಿ ನೌಕರ ಸಂಘದ ರಾಜ್ಯ ಕಾರ್ಯಧ್ಯಕ್ಷೆ ಶಾಂತಾ ಘ0ಟೆ ಎಚ್.ಡಿ. ರೇವಣ್ಣ ಅವರ ಈ ರೀತಿಯ ದುರ್ವರ್ತನೆ ಹಾಗೂ ಅನುಚಿತ ಮಾತುಗಳು ಖಂಡಿತವಾಗಿಯೂ ಒಬ್ಬ ಜನ ಪ್ರತಿನಿಧಿಗೆ ತಕ್ಕುದಾದುದಲ್ಲ. ಒಬ್ಬ ಶಾಸಕನಾಗಿ ಮತ್ತು ಒಬ್ಬ ಸಚಿವನಾಗಿ ಸರ್ಕಾರ ನಡೆಸಿದ ಅನುಭವ ಹೊಂದಿರುವ ಹಾಗೂ ರಾಜ್ಯದ ಒಬ್ಬ ಹಿರಿಯ ರಾಜಕಾರಣಿಯಾಗಿ ಅವರ ಘನತೆಯನ್ನು ಅವರೇ ಹಾಳು ಮಾಡಿಕೊಂಡಿದ್ದಾರೆ. ಒಬ್ಬ ಶಾಸಕನಾಗಿ ತನ್ನ ಕ್ಷೇತ್ರದ ಜನರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿರುವಾಗ ಅವರ ಪರವಾಗಿ ನಿಲ್ಲಬೇಕಾಗಿದ್ದ ಶಾಸಕ ಎಚ್.ಡಿ. ರೇವಣ್ಣ ಅವರು ಜನರ ವಿರುದ್ಧವಾಗಿ ನಿಂತು ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಎಸಗಿರುವ ಒಬ್ಬ ಅಧಿಕಾರಿಯ ಪರವಾಗಿ ನಿಂತಿದ್ದಾರೆ. ಅಷ್ಟಕ್ಕೂ ಅವರಿಗೆ ಸಂಬಂಧಿಸದ ವಿಚಾರದಲ್ಲಿ ಮಧ್ಯೆಪ್ರವೇಶಿಸಿ ಹುಂಬತನದಿಂದ ವರ್ತಿಸಿರುವುದು ನೋಡಿದರೆ ಅವರು ತಲುಪಿರುವ ಅಧೋಗತಿಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು ಈ ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷೆ ಸುರೇಖಾ ಕುಲಕರ್ಣಿ,ಸಿಐಟಿಯುನ ತಾಲೂಕ ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ, ಶಹಾಪುರ ಅಂಗನವಾಡಿ ನೌಕರ ಸಂಘದ ಅಧ್ಯಕ್ಷೆ ಬಸಲಿಂಗಮ್ಮ ನಾಟೆ ಕಾರ್, ಕಾರ್ಯದರ್ಶಿ ಯಮನಮ್ಮ ದೋರನಹಳ್ಳಿ, ವಡಗೇರಾ ತಾಲೂಕುಅಧ್ಯಕ್ಷೆ ಇಂದಿರಾ ದೇವಿ ಕೊಂಕಲ್, ಸುರಪುರ ತಾಲೂಕ ತಾಲೂಕುಅಧ್ಯಕ್ಷೆ ಬಸಮ್ಮ ಅಲಾಳ, ರಾಧಾಬಾಯಿ, ನಸೀಮಾ, ಅಕ್ಷರ ದಾಸೋಹ ನೌಕರ ಸಂಘದ ತಾಲೂಕ ಗೌರವಾಧ್ಯಕ್ಷೆ ಸುನಂದ ಹಿರೇಮಠ, ಖಜಾಂಚಿ ಮಂಜುಳ ಹೊಸಮನಿ, ಅರಣ್ಯ ಇಲಾಖೆಯ ವಾಚರ ನೌಕರರ ಸಂಘದ ತಾಲೂಕ ಅಧ್ಯಕ್ಷ ಮರ್ಲಿಂಗಪ್ಪ ಮಕಾಸಿ, ಧೂಲಾಸಾಬ್ ,ಹನುಮಂತ, ಅಶೋಕ, ಸಿದ್ದರಾಮ, ರೈತ ಸಂಘದ ತಾಲೂಕ ಕಾರ್ಯದರ್ಶಿ, ಬಸವರಾಜ್ ಭಜಂತ್ರಿ ಇದ್ದರು.
|
|