ಮಹಾಶೈವ ಪೀಠ ಕೈಲಾಸದಲ್ಲಿ ಭಕ್ತರ ಸಮಸ್ಯೆ ಪರಿಹರಿಸುತ್ತಿರುವ ಪೀಠಾಧ್ಯಕ್ಷರು

ರಾಯಚೂರು:ಇಂದು ಭಾನುವಾರ ಗಬ್ಬೂರಿನ ಮಹಾಶೈವ ಪೀಠ ಕೈಲಾಸದಲ್ಲಿ ಮಹಾಶೈವ ಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿವಿಧ ಗ್ರಾಮಗಳಿಂದ ಆಗಮಿಸಿದ ಹಲವಾರು ಜನ ಭಕ್ತರ ಸಮಸ್ಯೆಗಳನ್ನು ಆಲಿಸಿ ಅವರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ.ಸಂತಾನ ಸಮಸ್ಯೆ, ಹಲವಾರು ವರ್ಷಗಳಿಂದ ಇರುವ ತೀವ್ರ ಕಾಯಿಲೆಗಳು ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಮಹಾಶೈವ ಪೀಠದ ಪೀಠಾಧ್ಯಕ್ಷ ಗುರುಗಳಲ್ಲಿ ಸಿಗುತ್ತಿದ್ದು,ಸುಮಾರು ವರ್ಷಗಳ ತಪಸ್ಸಿನ ಫಲವಾಗಿ ತಾವು ಸಂಪಾದಿಸಿದ ಮಹಾಶಕ್ತಿಯನ್ನು ಭಕ್ತರಿಗೆ ದಾರಿಯೆರಿಯುವ ಆಸಕ್ತಿ ಮಹಾಶೈವ ಪೀಠದ ಅಧ್ಯಕ್ಷರಿಗಿದೆ.ಪ್ರತಿ ಭಾನುವಾರ ಮಹಾಶೈವ ಪೀಠಕ್ಕೆ ಭಕ್ತರು ಆಗಮಿಸುತ್ತಾರೆ.

ಮಹಾಶೈವಪೀಠಕ್ಕೆ ಹಲವಾರು ಜಿಲ್ಲೆಗಳಿಂದ ಮತ್ತು ಬೇರೆ ರಾಜ್ಯಗಳಿಂದ ಭಕ್ತರು ಆಗಮಿಸುತ್ತಿದ್ದು, ಈಗಾಗಲೇ ಹಲವು ಭಕ್ತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದ್ದು, ಇದರ ಪ್ರಯುಕ್ತ ಹಲವಾರು ಜನ ಭಕ್ತರು ಮಹಾಶೈವ ಪೀಠಕ್ಕೆ ಆಗಮಿಸುತ್ತಿದ್ದಾರೆ.ಅವರು ಮಾಡಿದ ತಪಸ್ಸಿನ ಫಲದಿಂದ ದೊರಕಿದ ಮಹಾಶಕ್ತಿಯನ್ನು ಭಕ್ತರ ಸಮಸ್ಯೆಗಳಿಗೆ ಮೀಸಲಿಡಬೇಕೆಂದು ಅವರ ಆಶಯವಾಗಿದೆ.

About The Author