ಪಾಟ್ನಾ:ಇತಿಹಾಸಕಾರರು ಮೊಘಲರ ಮೇಲೆ ಗಮನ ಹರಿಸಿ ಇತರ ಸಾಮ್ರಾಜ್ಯಗಳನ್ನು ಕಡೆಗಣಿಸಿದ್ದಾರೆ. ಆದರೀಗ ಇತಿಹಾಸ ಬದಲಾಯಿಸುವ, ಇತಿಹಾಸದ ಪುಸ್ತಕಗಳನ್ನು ಬದಲಾಯಿಸುವ ಸಮಯ ಬಂದಿದೆ ಎಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ರವರ ಹೇಳಿಕೆಗೆ ಬಿಹಾರ ಮುಖ್ಯಮಂತ್ರಿಗಳಾದ ನಿತೀಶ್ ಕುಮಾರ್ ಅವರು ನಗುತ್ತಾ,
ಇತಿಹಾಸವನ್ನು ಬದಲಾಯಿಸಲು ಸಾಧ್ಯವೇ, ಇತಿಹಾಸವೆಂದರೆ ಇತಿಹಾಸ. ಯಾರಾದರೂ ಮೂಲ ಇತಿಹಾಸವನ್ನು ಬದಲಾಯಿಸಲು ಆಗುತ್ತದೆಯೇ ಅದು ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.