ಯುನೈಟೆಡ್ ಪಬ್ಲಿಕ್ ಶಾಲೆಯಲ್ಲಿ ಪಾಲಕರ ಸಭೆ :: ಮಗುವಿನ ಶಿಕ್ಷಣದಲ್ಲಿ ಪೋಷಕರ ಮಹತ್ವದ್ದು : ಮಲ್ಲಣ್ಣ ಐಕೂರ

ಶಹಪುರ : ಮಗುವಿನ ಶಿಕ್ಷಣದಲ್ಲಿ ಪೋಷಕರ ಪಾತ್ರ ಮಹತ್ವದ್ದು. ಮಗುವಿನ ಸರಿಯಾದ ಶೈಕ್ಷಣಿಕ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ಶಿಕ್ಷಕರಿಗಿಂತ ಪೋಷಕರ ಪಾತ್ರ ಮುಖ್ಯ ಎಂದು ಜಿಲ್ಲಾ ಕುರುಬ ಸಂಘದ ಅಧ್ಯಕ್ಷರಾದ ಮಲ್ಲಣ್ಣ ಐಕೂರ ಹೇಳಿದರು.ತಾಲೂಕಿನ ಸೈದಾಪುರ ಗ್ರಾಮದ ಹೊಸಬೆಳಕು ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ, ಯುನೈಟೆಡ್ ಪಬ್ಲಿಕ್ ಶಾಲೆಯ ಪಾಲಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಮಗುವಿನ ಶಿಕ್ಷಣವೂ ಮನೆಯಿಂದಲೇ ಪ್ರಾರಂಭವಾಗುತ್ತದೆ. ಪೋಷಕರೇ ಅವರ ಮೊದಲ ಗುರು ಎಂದು ಹೇಳಿದರು.
ಉಪನ್ಯಾಸಕ ಶರಣಗೌಡ ಜೈನಾಪುರ ಮಾತನಾಡಿ,ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ಮಗುವಿನಲ್ಲಿ ಶಿಕ್ಷಕರು ಬಿತ್ತಬೇಕು,ಮಗುವಿನ ಕಲಿಕೆಯ ನೈಜತೆ ಅರಿತುಕೊಳ್ಳಬೇಕಾದರೆ ಪಾಲಕರು ಕಡ್ಡಾಯವಾಗಿ ಸಭೆಯಲ್ಲಿ ಹಾಜರಾಗಬೇಕು. ತಮ್ಮ ಮಗುವಿನ ಶೈಕ್ಷಣಿಕ ಅಭಿವೃದ್ಧಿ ಮತ್ತು ಸಾಮರ್ಥ್ಯ ಹಾಗೂ ದೌರ್ಬಲ್ಯಗಳು ಅವರ ಆಸಕ್ತಿಯ ಕ್ಷೇತ್ರಗಳ ಬಗ್ಗೆ ಪಾಲಕರು ಹೆಚ್ಚು ತಿಳಿದಿರುತ್ತಾರೆ ಎಂದು  ಹೇಳಿದರು.
ಸಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಅಂಬಲಯ್ಯ ಸೈದಾಪುರ ಮಾತನಾಡಿ ಮಗುವಿನ ವ್ಯಕ್ತಿತ್ವ,ಸ್ವಭಾವ,ಅಭ್ಯಾಸಗಳು, ಭಾವನಾತ್ಮಕ ಬೆಳವಣಿಗೆ ಇತ್ಯಾದಿಗಳನ್ನು ರೂಪಿಸುವಲ್ಲಿ ಪಾಲಕರು ನಿರ್ಣಾಯಕ ಪಾತ್ರ ವಹಿಸುತ್ತದೆ.
ಹೇಳಿದರು.ನಾಗನಟಗಿ ವೀರಭದ್ರೇಶ್ವರ ಸಂಸ್ಥಾನ ಹಿರೇಮಠದ ಪೂಜ್ಯರಾದ ಸಿದ್ದರಾಮೇಶ್ವರ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ತಿರುಪತಿಗೌಡ ಬಾಣತಿಯಾಳ, ಪತ್ರಕರ್ತ ಬಸವರಾಜ ಸಿನ್ನೂರ, ಭೀ.ಗುಡಿ ಕಸಾಪ ಮಹಿಳಾ ಪ್ರತಿನಿಧಿ ಶಾರದಾ ಹಿರೇಮಠ,ಸಂಸ್ಥೆಯ ಅಧ್ಯಕ್ಷರಾದ ಶರಣಬಸವ ಪೊಲೀಸ್ ಬಿರಾದಾರ, ಕಾರ್ಯದರ್ಶಿ ಶಿವಲಿಂಗಮ್ಮ ಪೊಲೀಸ್ ಬಿರಾದರ,ಕಲಾವಿದ ಮಹಾಂತೇಶ ಹುಲ್ಲೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.ಮುಖ್ಯ ಗುರುಗಳಾದ ದೇವಮ್ಮ ಶಿರವಾಳ ಸ್ವಾಗತಿಸಿದರು ಜೆಟ್ಟೆಪ್ಪ ಪೂಜಾರಿ ನಿರೂಪಿಸಿದರು,ಸಾಯಿಬಾಬಾ ವಂದಿಸಿದರು.