ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದದ್ದು : ಶಾಂತಗೌಡ

ಶಹಾಪುರ :ನೂತನ ಶಿಕ್ಷಕರು ಪರೀಕ್ಷಾರ್ಥ ಸೇವಾ ನೌಕರರು, ತಾವೆಲ್ಲರೂ ಬದ್ಧತೆಯೊಂದಿಗೆ ಕೆಲಸ ನಿರ್ವಹಿಸಬೇಕು.ಉತ್ತಮವಾದ ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರವೂ ಪ್ರಮುಖವಾಗಿದ್ದು,  ಸಮಾಜಕ್ಕೆ ಮಾದರಿಯಾಗಿ, ಗುಣಮಟ್ಟದ ಶಿಕ್ಷಣ ನೀಡಿ ಯಾದಗಿರಿ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು  ಎಂದು ನಿವೃತ್ತ ಉಪನಿರ್ದೇಶಕರಾದ  ಶಾಂತಗೌಡ ಪಾಟೀಲ್ ಹೊಸದಾಗಿ ನೇಮಕಗೊಂಡು ಬಂದಿರುವ ಶಿಕ್ಷಕರಿಗೆ ತಿಳಿಸಿದರು.ನಗರದ ಪಕೀರೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ 2022-23ನೇ ಸಾಲಿನಲ್ಲಿ ನೇಮಕಗೊಂಡ  ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಶಹಾಪುರ ತಾಲೂಕಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಹೊಸದಾಗಿ ನೇಮಕಗೊಂಡು ಬಂದಿರುವ ಶಿಕ್ಷಕರಿಗೆ  ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಫಕೀರೇಶ್ವರ ಮಠದ ಪೂಜ್ಯರಾದ
ಶ್ರೀ ಮ.ನಿ.ಪ್ರ.ಗುರುಪಾದ ಮಹಾಸ್ವಾಮಿಗಳು ವಹಿಸಿ, ಮಾತನಾಡಿದ ಅವರು ತಾವೆಲ್ಲರೂ ಅಕ್ಷರ ಬ್ರಹ್ಮರು, ಒಳ್ಳೆಯ ಕೆಲಸ ಮಾಡಿ ಮಕ್ಕಳಲ್ಲಿ ನೈತಿಕತೆ, ಮೌಲ್ಯಗಳನ್ನು ಬಿತ್ತಬೇಕು ಎಂದು ಆಶೀರ್ವಚನ ನೀಡಿದರು.ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರಾದ  ವಿಶ್ವನಾಥರೆಡ್ಡಿ ದರ್ಶನಾಪುರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
 ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ  ರೇಣುಕಾ ಪಾಟೀಲ್,
 ಶಹಾಪುರ ತಾಲೂಕಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ  ಅಧ್ಯಕ್ಷರಾದ ಸಿದ್ದನಗೌಡ ಗೂಗಲ್,ಕ.ರಾ.ಸ.ನೌ.ಸಂಘದ ಅಧ್ಯಕ್ಷರಾದ ರಾಯಪ್ಪಗೌಡ ಹುಡೆದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ  ಚಂದಪ್ಪ ಎಚ್. ಎಸ್.  ಜಿಲ್ಲಾಧ್ಯಕ್ಷರಾದ  ಮಲ್ಲಯ್ಯ ಸಂಜೀವಿನಿ ನಿರ್ದೇಶಕರುಗಳಾದ  ಬಸವರಾಜ್ ಬೆಳ್ಳಿಕಟ್ಟಿ,  ರೇವಣಸಿದ್ದೇಶ್ವರ ಅಂಗಡಿ ಆಲ್ದಾಳ್,ಪ್ರಾಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ  ಭೀಮನಗೌಡ ತಳೆವಾಡ್, ತಾಲೂಕಿನ ದೈಹಿಕ ಶಿಕ್ಷಣಧಿಕಾರಿಗಳಾದ  ಶರಣಗೌಡ ಪಾಟೀಲ್, ಅಕ್ಷರ ದಾಸೋಹ ಅಧಿಕಾರಿಗಳಾದ  ಮಲ್ಲನಗೌಡ ಪಾಟೀಲ್,  ಬಿ. ಆರ್. ಪಿ. ಗಳಾದ ರಾಜಶೇಖರ್ ಪತ್ತಾರ್ ಸೇರಿದಂತೆ ಇತರರು ಇದ್ದರು.ಶಿಕ್ಷಕರಾದ  ಚಂದಪ್ಪ ಹುರುಸಗುಂಡಿಗಿ ನಿರೂಪಿಸಿದರು, ಶ್ರೀಮತಿ ಪದ್ಮಾ ಸಗರ್ ಸ್ವಾಗತಿಸಿದರು, ಕೋಶಾಧ್ಯಕ್ಷರಾದ ಶಿವಪ್ರಸಾದ್ ಕರದಳ್ಳಿ ವಂದಿಸಿದರು.