ಮೃತದೇಹ ದಾನ ಮಾಡಿದವರನ್ನು ಕಡೆಗಣಿಸಿದ ಜಿಲ್ಲಾಡಳಿತ ತಾಲೂಕು ವೈದ್ಯರಿಂದ ಸನ್ಮಾನ

 ಶಹಾಪೂರ :ಸರಕಾರದ ಆದೇಶದಂತೆ ಪ್ರತಿ ವರ್ಷ ಅಂಗಾಂಗ ದಾನ ಮಾಡಿರುವ ಕುಟುಂಬ ಸದಸ್ಯರಿಗೆ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭಗಳಲ್ಲಿ ಪ್ರಶಂಸ ಪತ್ರಗಳನ್ನು ನೀಡಿ ಗೌರವಿಸಬೇಕೆಂದು ಸರಕಾರ ಆದೇಶಿಸಿದೆ ಆದರೆ ಯಾದಗಿರಿ ಜಿಲ್ಲಾಡಳಿತವು 17.08.2023 ರಂದು ಮೃತನಾದ ಸಿದ್ಧನಗೌಡ ಕರಡಿ ಎನ್ನುವವರ ಮೃತ ದೇಹವನ್ನು ಯಾದಗಿರಿ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕುಟುಂಬಸ್ಥರು ದಾನ ಮಾಡಿದ್ದರು. ಕಳೆದ 78ನೇ ಸ್ವಾತಂತ್ರ್ಯ ದಿನೋತ್ಸವದಂದು ಜಿಲ್ಲಾಡಳಿತ ಅವರ ಕುಟುಂಬಸ್ಥರನ್ನು ಸರ್ಕಾರದ ನಿಯಮಾವಳಿ ಪ್ರಕಾರ ಪ್ರಶಂಶಾ ಪತ್ರ ನೀಡಿ ಗೌರವಿಸಿ ಸನ್ಮಾನಿಸಬೇಕಿತ್ತು. ಆದರೆ ಜಿಲ್ಲಾಡಳಿತ ಮರೆತಂತಿದೆ.ಇದರ ಬಗ್ಗೆ ಜಿಲ್ಲಾಡಳಿತಕ್ಕೆ ಗೊತ್ತಿಲ್ಲವೇ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.ಶಹಾಪುರ ತಾಲೂಕು ಆಸ್ಪತ್ರೆಯಿಂದ 78ನೇ ಸ್ವಾತಂತ್ರ್ಯ ದಿನೋತ್ಸವದಂದು ವೈದ್ಯರು ಮತ್ತು ಸಿಬ್ಬಂದಿಯವರು ಮೃತ ಸಿದ್ದಣ್ಣ ಕರಡಿಯವರ ಮಗನಾದ ರಾಚನಗೌಡ ಅವರಿಗೆ ಸನ್ಮಾನಿಸಿ ಗೌರವಿಸಿದರು.

About The Author