ವೈಧ್ಯವೃತ್ತಿ  ಶ್ರೇಷ್ಠವಾದದ್ದು – ಬಸವಯ್ಯ ಶರಣರು

ಶಹಾಪುರ : ವೈಧ್ಯವೃತ್ತಿ ಸರ್ವಶ್ರೇಷ್ಠವಾದದ್ದು. ರೋಗಿಗಳಿಗೆ ಅವರು ದೇವರ ಸ್ವರೂಪಿಯಾಗಿರುತ್ತಾರೆ.  ಶಹಾಪುರದ ಸಾಮಾಜಿಕ
ಪರಿಸರಕ್ಕೆ ಬಸವೇಶ್ವರ ಆಸ್ಪತ್ರೆ ಒಳ್ಳೆಯ ಸೇವೆ ನೀಡುವುದರ ಮೂಲಕ ಮಾದರಿಯಾಗಲು ಇಲ್ಲಿನ ವೈಧ್ಯರು
ಶ್ರಮಿಸಬೇಕೆಂದು ಚರಬಸವೇಶ್ಚರ ಸಂಸ್ಥಾನ ಗದ್ದುಗೆಯ  ಪೂಜ್ಯರಾದ ಬಸವಯ್ಯ ಶರಣರು ತಿಳಿಸಿದರು. ನಗರದ
ಬಸವೇಶ್ವರ ಗಂಜ್ ಹತ್ತಿರ ಬಸವೇಶ್ವರ ಆಸ್ಪತ್ರೆ ಉದ್ಘಾಟನಾ ಸಮಾರಂಭದ  ಸಾನಿಧ್ಯ ವಹಿಸಿ ಮಾತನಾಡಿದರು.
ಪಕೀರೇಶ್ವರ  ಮಠದ ಗುರುಪಾದ ಸ್ವಾಮಿಜಿ ಮತ್ತು  ಮೃತುಂಜಯಸ್ವಾಮಿ  ಚಿಕ್ಕಮಠ ಸಾನಿಧ್ಯವಹಿಸಿದ್ದರು.
ಟಿ.ಎ.ಪಿ.ಸಿ.ಎಮ್.ಎಸ್ ಅಧ್ಯಕ್ಷರಾದ ಗುರುನಾಥರಡ್ಡಿ ಪೋಲಿಸ್ ಪಾಟೀಲ್ ಜ್ಯೋತಿ ಬೆಳಗಿಸಿದರು.  ಖ್ಯಾತ ವೈಧ್ಯರಾದ
ಮಂಜುನಾಥ ದೋಶೆಟ್ಟಿ, ಡಾ. ಚಂದ್ರಶೇಖರ ಸುಭೆದಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ  ಡಾ.ಸಂತೋಷ
ಕಾಮಶೆಟ್ಟಿ, ಆಸ್ಪತ್ರೆಯ ವೈಧ್ಯರಾದ ರವೀಂದ್ರ ಪಾಟೀಲ್ ತಡಿಬಿಡಿ, ಡಾ. ಅಶ್ವಿನಿ ಪಾಟೀಲ್ ತಡಿಬಿಡಿ,    ಡಾ.ಗಣೇಶ
ಚಿಕ್ಕಮಠ, ಡಾ.ರಮೇಶ ಹವಾಲ್ದಾರ್ ಮುಂತಾದವರು ಉಪಸ್ಥಿತಿರಿದ್ದರು.

About The Author