ವಿಧಾನ ಪರಿಷತ್ ಚುನಾವಣೆ ಉಸ್ತುವಾರಿಯಾಗಿ ಬಿಎಂ ಪಾಟೀಲ್ ನೇಮಕ

ವಡಗೇರಾ : ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು, ಚಿತ್ರದುರ್ಗದ ಮೊಣಕಾಲ್ಮೂರು ಕ್ಷೇತ್ರದ ಉಸ್ತುವಾರಿಯನ್ನಾಗಿ ಕೆಪಿಸಿಸಿ ವಕ್ತಾರರಾದ ಬಿ ಎಂ ಪಾಟೀಲರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷಯು ನೇಮಕ ಮಾಡಿ ಆದೇಶಿಸಿದೆ. ದಿನಾಂಕ ಜೂನ್ ಮೂರರಂದು ಸೋಮವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಚುನಾವಣೆ ನಡೆಯಲಿದ್ದು ಅಂದೆ ಫಲಿತಾಂಶ ಹೊರ ಬೀಳಲಿದೆ. ಮೊಣಕಾಲ್ಮೂರು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾದ ಡಿಟಿ ಶ್ರೀನಿವಾಸ್ ಅವರ ಗೆಲುವಿಗಾಗಿ ಮೊಣಕಾಲ್ಮೂರು ಕ್ಷೇತ್ರದಾದ್ಯಂತ ಶಿಕ್ಷಕರ ಮತಗಳನ್ನು ಕ್ರೂಢೀಕರಿಸಲು ಬಿಎಮ್ ಪಾಟೀಲರು ಶ್ರಮಿಸಬೇಕಿದೆ.

About The Author