ಇಂದು ಗಂಗಾನಗರ ಹಳಿಪೇಠದಲ್ಲಿ ಶಾಲಾ ಪ್ರಾರಂಭೋತ್ಸವ

ಶಹಾಪುರ: ಗಂಗಾನಗರ ಮತ್ತು ಹಳೆಪೇಠೆ ಶಾಲೆಯಲ್ಲಿ ಇಂದು ಶಾಲಾ ಪ್ರಾರಂಭೋತ್ಸವ ನಿಮಿತ್ತ ಶಾಲೆಗೆ ಆಗಮಿಸಿದ ಮಕ್ಕಳಿಗೆ ಶಾಲಾ ಶಿಕ್ಷಕರು ಶಾಲು ಹಾಕಿ ಗುಲಾಬಿ ಹೂ ಮತ್ತು ಸಿಹಿ ಹಂಚುವದರ ಮೂಲಕ ಮಕ್ಕಳಿಗೆ ಸ್ವಾಗತ ಕೊರಿ ಶಾಲೆಗೆ ಬರಮಾಡಿಕೊಳ್ಳಲಾಯಿತು.ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ರಾಯಪ್ಪಗೌಡ ಹುಡೇದ ಮಾತನಾಡಿ, ಮಕ್ಕಳು ಸರಕಾರಿ ಶಾಲೆಯಲ್ಲಿ ದಾಖಲಾತಿ ಮಾಡಿಕೊಂಡು ಶಾಲೆಗೆ ಸೇರಿ ಸರಕಾರ ನೀಡುವ ಉಚಿತ ಸಮವಸ್ತ್ರ ಪುಸ್ತಕ ಬಿಸಿ ಊಟದ ಸೌಲಭ್ಯ ಬಳಸಿಕೊಂಡು ಉತ್ತಮ ಪ್ರಜೆಗಳಾಗಿ ಉನ್ನತ ಮಟ್ಟಕ್ಕೆ ಬೆಳೆಯಲು ಮುಂದಾಗಬೇಕೆಂದು ಕರೆ ನೀಡಿದರು.

ಸರಕಾರಿ ನೌಕರರ ಸಂಘದ ಸದಸ್ಯರಾದ ಗೋಪಾಲ ಬೀಜಸಪೂರ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘದ ಅಧ್ಯಕ್ಷರಾದ ಮೌನೇಶ ಹಳಿಸಗರ, ಗಂಗಾನಗರ ಶಾಲೆಯ ಮುಖ್ಯ ಗುರುಗಳಾದ ಶಾಂತಾಬಾಯಿ,
ಹಳಿಸಗರ ಶಾಲೆಯ ಮುಖ್ಯ ಗುರುಗಳಾದ ಗೋವಿಂದಮ್ಮ,
ಸಹ ಶಿಕ್ಷಕರಾದ ಸಂಗನಬಸವ ಮಠಪತಿ ಜ್ಯೋತಿ ಸುನೀತಾ ನಂದಾ  ಲಕ್ಷ್ಮೀಬಾಯಿ,ಜಮುನಾ ಚನ್ನಮ್ಮ ಮಡಿವಾಳಪ್ಪ ದುಂಡಪ್ಪ ಶಾಂತಮ್ಮ ಸಹೀರಾಬಾನು ಇದ್ದರು. ಸರಸ್ವತಿ ಮತ್ತು ಗಣೇಶ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವದರ ಮೂಲಕ ಶಾಲಾ ತರಗತಿಗಳನ್ನು ಪ್ರಾರಭಿಸಲಾಯಿತು.

About The Author