ಶಿವಸರ್ವೋತ್ತಮ ಸಂದೇಶ ಸಾರಿದ ಅಪರೂಪದ ಸಂದರ್ಭ !

ಶಿವಲೀಲಾ ಭೂಮಿ : ಶಿವಸರ್ವೋತ್ತಮ ಸಂದೇಶ ಸಾರಿದ ಅಪರೂಪದ ಸಂದರ್ಭ !

ಮಹಾಶೈವ ಧರ್ಮಪೀಠದಲ್ಲಿ ಭಕ್ತರ ಎಂತಹದೆ ಕಷ್ಟಕರ ಪರಿಸ್ಥಿತಿಗಳಿಗೆ ಪರಿಹಾರವಿದೆ.ಪರಶಿವನು ಶ್ರೀಕ್ಷೇತ್ರ ಕೈಲಾಸದಲ್ಲಿ ತನ್ನ ಲೋಕಕಾರುಣ್ಯದ ಲೋಕೋದ್ಧಾರದ ಲೀಲೆ ನಟಿಸುತ್ತಿದ್ದು ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಮೂಲಕ ತನ್ನ ಸನ್ನಿಧಿಗೆ ಬರುವ ಭಕ್ತರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾನೆ.ಮುಕ್ಕಣ್ಣ ಕರಿಗಾರ ಅವರು ಭಕ್ತರ ಸಮಸ್ಯೆಗಳನ್ನು ನಿವೇದಿಸುತ್ತಿದ್ದಂತೆಯೇ ವಿಶ್ವೇಶ್ವರ ಶಿವನು ಅದರ ಪರಿಹಾರ ಸೂಚಿಸುತ್ತಾನೆ.ಆದರೆ ವಿಶ್ವೇಶ್ವರ ಶಿವನು ಒಮ್ಮೊಮ್ಮೆ ಸಮಸ್ಯೆಯು ಕ್ಲಿಷ್ಟಕರವಾಗಿದ್ದಾಗಲೊ ಅಥವಾ ಮತ್ತಾವುದೋ ಕಾರಣದಿಂದಲೋ ಪರಿಹಾರ ಸೂಚಿಸಲು ವಿಳಂಬ ಮಾಡುತ್ತಾನೆ.ಆದರೆ ಮುಕ್ಕಣ್ಣ ಕರಿಗಾರ ಅವರು ಬಿಡದೆ ಶಿವನನ್ನು ಕಾಡಿ,ಬೇಡಿ ಪರಿಹಾರ ಪಡೆಯುತ್ತಾರೆ.

ಮೇ 12 ರಂದು ನಡೆದ 92 ನೆಯ ‘ ಶಿವೋಪಶಮನ ಕಾರ್ಯ’ ದಲ್ಲಿ ಭಕ್ತ -ಭಗವಂತರ ನಡುವಿನ ಸಂಜ್ಞೆಯ ಮೂಲಕ ನಡೆಯುವ ಸಂಭಾಷಣೆಯ ಅಂತಹ ಪ್ರಸಂಗ ಒಂದು ನಡೆಯಿತು.ಮಹಾಶೈವ ಧರ್ಮಪೀಠದ ಅತ್ಯಂತ ನಿಷ್ಠಾವಂತ ಭಕ್ತರು,ಕಾರ್ಯಕರ್ತರಲ್ಲೊಬ್ಬರಾದ ರಘುನಂದನ್ ಪೂಜಾರಿ ಅವರು ತುಮಕೂರಿನಿಂದ ಅವರ ಅತ್ತಿಗೆ ( ಅಣ್ಣನ ಹೆಂಡತಿ)ಅವರನ್ನು ಇಂದು ವಿಶ್ವೇಶ್ವರ ಶಿವನ ಸನ್ನಿಧಿಗೆ ಕಳಿಸಿದ್ದರು.ಅವರ ಸಮಸ್ಯೆಯನ್ನು ಪೀಠಾಧ್ಯಕ್ಷರು ಶಿವನ ಬಳಿ ನಿವೇದಿಸುತ್ತಿದ್ದಂತೆಯೇ ವಿಶ್ವೇಶ್ವರನು ಮೌನಿಯಾದನು.’ ಸಮಸ್ಯೆಗೆ ಪರಿಹಾರ ನೀಡಲೇಬೇಕು ತಂದೆ ಶಿವ ವಿಶ್ವೇಶ್ವರ’ ಎಂದು ಮುಕ್ಕಣ್ಣ ಕರಿಗಾರ ಅವರು ಒತ್ತಾಯಿಸುತ್ತಿದ್ದರು.

ವಿಶ್ವೇಶ್ವರ ಶಿವನು ಸಂದೇಶ ಕಳಿಸುವಲ್ಲಿ ವಿಳಂಬ ಮಾಡುತ್ತಿದ್ದುದರಿಂದ ಪೀಠಾಧ್ಯಕ್ಷರು ಬಿಡದೆ ‘ ಸಮಸ್ಯೆಗೆ ಪರಿಹಾರ ನೀಡದಿದ್ದರೆ ನಿನ್ನ ವಿಶ್ವನಿಯಾಮಕ ತತ್ತ್ವಕ್ಕೆ ಏನು ಅರ್ಥ? ತಂದೆ ವಿಶ್ವೇಶ್ವರ ನೀನು ಸರ್ವಶಕ್ತನಲ್ಲವೆ ? ನಿನ್ನನ್ನು ನಂಬಿ ಬರುವ ಭಕ್ತರ ಸಮಸ್ಯೆಗಳನ್ನು ಪರಿಹರಿಸುವುದು ನಿನ್ನ ಲೋಕಕಾರುಣ್ಯ ಧರ್ಮ.ಇವರ ಸಮಸ್ಯೆಗೆ ಪರಿಹಾರ ನೀಡು’ ಎಂದು ಸಂಜ್ಞಾಭಾಷೆಯ ಮೂಲಕ ಪ್ರಾರ್ಥಿಸುತ್ತಿದ್ದುದನ್ನು ಭಕ್ತಗಣ ಮೂಕವಿಸ್ಮಿತರಾಗಿ ನೋಡುತ್ತಿದ್ದರು.ಪಟ್ಟುಬಿಡದೆ ಪ್ರಾರ್ಥಿಸಿ ಮುಕ್ಕಣ್ಣ ಕರಿಗಾರ ಅವರು ರಘುನಂದನ್ ಅವರ ಅತ್ತಿಗೆಯ ಸಮಸ್ಯೆಗೆ ವಿಶ್ವೇಶ್ವರನ ಅಭಯ,ಅನುಗ್ರಹ ಪಡೆಯುವಲ್ಲಿ ಯಶಸ್ವಿಯಾದರು.ಶಿವನ ಅನುಗ್ರಹದೊರೆತ ಬಳಿಕವಷ್ಟೇ ಪೀಠಾಧ್ಯಕ್ಷರು ಅವರಿಗೆ ವಿಭೂತಿ ಮಂತ್ರಿಸಿಕೊಟ್ಟರು.

ಮಹಾಶೈವ ಧರ್ಮಪೀಠದಲ್ಲಿ ಇಂತಹ ಪ್ರಸಂಗಗಳು ಜರುಗುವುದು ಸಾಮಾನ್ಯ.’ ನಿನ್ನ ಸನ್ನಿಧಿಗೆ ಬರುವ ಭಕ್ತರ ಸಮಸ್ಯೆಗಳನ್ನು ಪರಿಹರಿಸು ತಂದೆ ಶಿವ’ ಎಂದು ಪ್ರಾರ್ಥಿಸಿಯೇ ಶಿವೋಪಶಮನ ಕಾರ್ಯ ಪ್ರಾರಂಭಿಸುವ ಪೀಠಾಧ್ಯಕ್ಷರು ಭಕ್ತರ ಎಂತಹದೆ ಕಷ್ಟಕರ,ಕ್ಲಿಷ್ಟಕರ ಸಮಸ್ಯೆ ಇದ್ದರೂ ಶಿವನಿಂದ ಪರಿಹಾರ ಸಿಗುವವರೆಗೆ ಪ್ರಾರ್ಥಿಸುತ್ತಲೇ ಇರುತ್ತಾರೆ.ವಿಶ್ವೇಶ್ವರ ಶಿವ ಮತ್ತು ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ನಡುವೆ ಮೌನಭಾಷೆಯಲ್ಲಿ ಸಾಗುವ ಈ ಸಂವಾದ ಕಾರ್ಯ ಬೆರಗು ಹುಟ್ಟಿಸುವಂತಹದ್ದು. ಕುಂಡಲಿನೀ ಯೋಗಸಿದ್ಧರಾದ ಮುಕ್ಕಣ್ಣ ಕರಿಗಾರ ಅವರು ಆಜ್ಞಾಚಕ್ರದ ಮೂಲಕ ಪರಶಿವನ ಪರಾವಾಕ್ಕಿನ ಭಾಷೆಯನ್ನು ಓದಿ,ಭಕ್ತರಿಗೆ ಶಿವಾಭಯ,ಶಿವಾನುಗ್ರಹ ಕರುಣಿಸುತ್ತಾರೆ .ಸರ್ವಶಕ್ತನೂ ವಿಶ್ವನಿಯಾಮಕನೂ ಆಗಿರುವ ವಿಶ್ವೇಶ್ವರ ಶಿವನಿಂದ ಪರಿಹಾರ ಕಾಣದ ಸಮಸ್ಯೆ ಪ್ರಪಂಚದಲ್ಲಿಯೇ ಇಲ್ಲ ಎಂದು ದೃಢವಾಗಿ ನಂಬಿರುವ ಮುಕ್ಕಣ್ಣ ಕರಿಗಾರ ಅವರು ಪ್ರತಿ ಆದಿತ್ಯವಾರದ ಶಿವೋಪಶಮನ ಕಾರ್ಯದಲ್ಲಿ ಅದನ್ನು ನಿರೂಪಿಸುತ್ತಿದ್ದಾರೆ.

About The Author