ಶಹಾಪುರ : ಅಂಗವಿಕಲರು ಸರಕಾರದ ಸೌಲಭ್ಯಗಳನ್ನು ಪಡೆಯಬೇಕು ಎಂದು ಹಿರಿಯ ನ್ಯಾಯಧೀಶರು ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರ ಸಮಿತಿ ಅಧ್ಯಕ್ಷರಾದ ಸಿದ್ರಾಮ ಟಿ. ಪಿ. ಕರೆ ನೀಡಿದರು.
ಶಹಾಪೂರ ಟೌನ್ ಹಾಲ್ ನಲ್ಲಿ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಧೀಶರು ಸರ್ಕಾರದ ಯೋಜನೆಗಳನ್ನು ಸರಿಯಾಗಿ ಪಡೆದುಕೊಳ್ಳಿ. ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಡಿ ಎಂದರು.
ಈ ಸಂದರ್ಭದಲ್ಲಿ ಶಿಸು ಅಭಿವೃದ್ಧಿ ಯೋಜನೆ ಅಧಿಕಾರಿಗಳಾದ ಮೀನಾಕ್ಷಮ್ಮ ಪಾಟೀಲ್ ಬೀಮನಗೌಡ ಬಿರೇದಾರ ಸಹಾಯಕರು ತಾಲೂಕ ಪಂಚಾಯತ್ ಶಹಾಪೂರ,ರಾಜೇಶ್ವರಿ ವಕೀಲರ ಮತ್ತು ನಾಗರಾಜ್ ವಿ. ಆರ್. ಡಬ್ಲ್ಯೂ. ಸುಭಾಸ ಹೋತಪೇಟ ಅಂಗವಿಕಲರ ಸಂಘಟನೆಯ ರಾಜ್ಯಾಧ್ಯಕ್ಷರು, ವೀರೇಶ ಆನೇಗುಂದಿ ಅದ್ಯಕ್ಷರು ಶಹಾಪೂರ, ಬಾಬು ಜಾನಿ ತಾಲೂಕಾದ್ಯಕ್ಷರು ಶಹಾಪೂರ, ಚಿನ್ನು ಶಹಾಪೂರ ಸೇರಿದಂತೆ ಇತರ ಸಂಘ ಸಂಸ್ಥೆಗಳು ಬಾಗವಹಿಸಿದ್ದರು.