ಯುವಕರ ಕಣ್ಮಣಿ ಸಂಘಟನಾ ಚತುರ ಬಿವೈ ವಿಜಯೇಂದ್ರನಿಗೆ ಬಿಜೆಪಿ ರಾಜ್ಯಾಧ್ಯಕ್ಷಪಟ್ಟ ಕರಣ ಸುಬೇದಾರ ಹರ್ಷ

KARAN SUBEDAR
BJP youth leader Shahapur constitution 

******

Yadagiri ಶಹಪುರ : ರಾಜ್ಯದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು ಬಿ ವೈ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದರಿಂದ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ.ಬಿಜೆಪಿಯ ರಾಷ್ಟ್ರೀಯ ನಾಯಕರು ಯುವಕರಿಗೆ ಆದ್ಯತೆ ನೀಡಿ ವಿಜಯೇಂದ್ರ ಅವರನ್ನು ರಾಜ್ಯ ಅಧ್ಯಕ್ಷರನ್ನಾಗಿ ಮಾಡಿದ್ದಾರೆ.ಬರುವ ಲೋಕಸಭೆ ಚುನಾವಣೆಯಲ್ಲಿ ವಿಜಯೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಕರ್ನಾಟಕದಲ್ಲಿ 25ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿಯ ಯುವ ನಾಯಕ ಕರಣ ಸುಬೇದಾರ ಹೇಳಿದರು.

ಕಳೆದ ಸಾರಿ ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ವಿಜಯೇಂದ್ರ ಅವರು ಹಲವು ಉಪಚುನಾವಣೆಯಲ್ಲಿ ಕ್ಷೇತ್ರಗಳ ಜವಾಬ್ದಾರಿಯನ್ನು ವಹಿಸಿಕೊಂಡು
ಬಿಜೆಪಿ ಪಕ್ಷಕ್ಕೆ ಗೆಲುವು ತಂದು ಕೊಟ್ಟಿದ್ದರು.ಅವರ ಚತುರತೆ ಸಂಘಟನೆಯನ್ನು ನೋಡಿ ರಾಷ್ಟ್ರೀಯ ನಾಯಕರು ಅತಿ ದೊಡ್ಡ ಜವಾಬ್ದಾರಿಯನ್ನು ವಿಜಯೇಂದ್ರರವರಿಗೆ ನೀಡಿದ್ದಾರೆ.
ಅವರ ತಂದೆಯಂತೆಯೇ ವಿಜಯೇಂದ್ರ ರೈತ ನಾಯಕ. ಯುವಕರ ಜೊತೆಗೆ ಹಿರಿಯ ನಾಯಕರನ್ನು ಜೊತೆಗೂಡಿಸಿಕೊಂಡು ರಾಜ್ಯದ ಅಭಿವೃದ್ಧಿಗಾಗಿ ಪಕ್ಷದ ಒಳಿತಿಗಾಗಿ ದುಡಿಯುವ ವ್ಯಕ್ತಿ. ರಾಜ್ಯದಲ್ಲಿ ಯುವಕರಿಗೆ ಹೆಚ್ಚಿನ ಸ್ಥಾನಮಾನಗಳು ಸಿಗುವ ಭರವಸೆ ಇದೆ.

ದಣಿವರಿಯದ ನಾಯಕನಾದ ವಿಜಯೇಂದ್ರ ಜಾತಿ ಧರ್ಮ ಎನ್ನದೆ ಎಲ್ಲಾ ಜಾತಿಗಳನ್ನು ಧರ್ಮಗಳನ್ನು ಒಗ್ಗೂಡಿಸಿಕೊಂಡು ಅದ್ಭುತವಾದ ಶಕ್ತಿ ಪ್ರದರ್ಶನ ತೋರಿಸಲಿದ್ದಾರೆ.ಒಬ್ಬ ಸಮರ್ಥ ನಾಯಕ ರಾಜ್ಯಕ್ಕೆ ದೊರಕಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಯಾದಗಿರಿ ಜಿಲ್ಲೆಯಲ್ಲಿಯೂ ಕೂಡ ಯುವಕರಿಗೆ ಆದ್ಯತೆ ಸಿಗಲಿದೆ ಎಂದರು.

About The Author