ಶಹಾಪುರ: ಕರ್ನಾಟಕ ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿಗಳ ಮಗನಾದ B Y ವಿಜೆಯೇಂದ್ರ ರವರಿಗೆ ಯಾದಗಿರಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶರಣಗೌಡ ಪಾಟೀಲ ಐಕೂರು ಇಂದು ಬೆಂಗಳೂರಿನ ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದಲ್ಲಿ ಪುಷ್ಪಗುಚ್ಚ ನೀಡಿ ಶುಭಾಶಯ ಕೋರಿದರು.
ಯುವಕರ ಆಶಾಕಿರಣ ಯುವ ಉತ್ಸಾಹಿ ಭವಿಷ್ಯದ ಬಿಜೆಪಿ ನಾಯಕರಾದ ರಾಜ್ಯ ಬಿಜೆಪಿ ಉಪಾಧ್ಯಕ್ಷರು ಶಿಕಾರಿಪುರದ ಶಾಸಕರಾದ ವಿಜಯೇಂದ್ರ ರವರು ತಂದೆಯಂತೆಯೇ ಈ ರಾಜ್ಯದ ಉನ್ನತ ನಾಯಕರಾಗಿ ಹೊರಬರಲಿ ಎನ್ನುವುದು ರಾಜ್ಯದ ಜನರ ಮನದಾಸೆಯಾಗಿದೆ ಎಂದರು.