ಲಿಂಗಾಯತ ಬಣಜಿಗ ಸಮಾಜದವರನ್ನು ಬೇರೆ ಪಕ್ಷದವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ |  ರಾಷ್ಟ್ರದ ಅಭಿವೃದ್ಧಿ ಪರ ಸಮಾಜವಿದೆ ದೇಶಮುಖ್ ಹೇಳಿಕೆ

ಶಹಾಪುರ : ಬೇರೆ ಪಕ್ಷದವರು ಲಿಂಗಾಯತ ಬಣಜಿಗ ಸಮಾಜದವರನ್ನು ಇತರ ಪಕ್ಷದವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.  ಸಮಾಜವು ನಮ್ಮ ಜೊತೆಗಿದೆ ಎಂದು ಹೇಳುತ್ತಿದ್ದಾರೆ. ಅದು ಶುದ್ಧ ಸುಳ್ಳು. ನಮ್ಮ ಸಮಾಜ ನ್ಯಾಯದ ಪರ ಮತ್ತು ಅಭಿವೃದ್ಧಿಪರ ರಾಷ್ಟ್ರದ ರಕ್ಷಣೆಗೋಸ್ಕರವಿದೆ. ಅಂತಹ ಪಕ್ಷ ಬಿಜೆಪಿ ಪಕ್ಷವಾಗಿದ್ದು ನಮ್ಮ ಸಮಾಜದ ಶೇ. 60ರಷ್ಟು ಜನ ಬಿಜೆಪಿ ಪಕ್ಷದ ಜೊತೆಗಿದ್ದಾರೆ. ಉಳಿದ ಶೇ.40  ಜನ ಇತರ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಲಿಂಗಾಯತ ಬಣಜಿಗ ಸಮಾಜದ ಮುಖಂಡರಾದ ಡಾ. ಶಿವರಾಜ ದೇಶಮುಖ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನಗರದ ಡಾ.ಶಿವರಾಜ ದೇಶಮುಖ ಮನೆಯಲ್ಲಿ ನಡೆದ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ಪರೋಕ್ಷವಾಗಿ ಜೆಡಿಎಸ್ ಪಕ್ಷಕ್ಕೆ ಕೌಂಟರ್ ನೀಡಿದರು.
*****
ಚುನಾವಣೆ ಸಂದರ್ಭದಲ್ಲಿ ಬಣಜಿಗ ಸಮಾಜದವರು ಸಲ್ಲದ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಯಾವುದೇ ಕಿವಿ ಕೊಡದೆ ಗೊಂದಲಕ್ಕೆ ಒಳಗಾಗದೆ ತಮ್ಮ ಇಚ್ಛಾನುಸಾರ ನಡೆದುಕೊಳ್ಳಬೇಕು.
ಡಾ.ಚಂದ್ರಶೇಖರ ಸುಬೇದಾರ ಲಿಂಗಾಯತ
 ಬಣಜಿಗ ಸಮಾಜದ ಅಧ್ಯಕ್ಷರು
****
ಲಿಂಗಾಯತ ಬಣಜಿಗ ಸಮಾಜವನ್ನು ಹಲವಾರು ವರ್ಷಗಳಿಂದ ಕಟ್ಟಿ ಬೆಳೆಸಿದ್ದೇವೆ.ಉದ್ಯೋಗ ಶಿಕ್ಷಣ ಮೀಸಲಾತಿಗಾಗಿ ಹೋರಾಟ ಮಾಡಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಗೊಂದಲ ಎಬ್ಬಿಸುವುದು ಸರಿಯಲ್ಲ. ಒಂದೇ ಪಕ್ಷದ ಹಿಡಿತದಲ್ಲಿ ಬಣಜಿಗ ಸಮಾಜದವರು ಇಲ್ಲ.ತಮ್ಮ ಇಚ್ಛಾನುಸಾರ ನಡೆದುಕೊಳ್ಳಬೇಕು. ಯಾವುದೇ ಗೊಂದಲಕ್ಕೆ ಒಳಗಾಗಬಾರದು.
ಬಸವರಾಜ ಅರುಣಿ ಲಿಂಗಾಯತ ಬಣಜಿಗ ಸಮಾಜದ ಕಾರ್ಯದರ್ಶಿ

About The Author