ಮಹಾಶೈವ ಧರ್ಮಪೀಠದಲ್ಲಿ 33 ನೆಯ ‘ ಶಿವೋಪಶಮನ ಕಾರ್ಯ : ಯಾದಗಿರಿ ಜಿಲ್ಲೆಯ ಸಾಬಣ್ಣ ಪಾರ್ಶ್ವವಾಯು ಕಾಯಿಲೆಯಿಂದ ಗುಣಮುಖ

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಜನೆವರಿ 29 ರಂದು 33 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಗಬ್ಬೂರು ಹಾಗೂ ಪರ ಊರುಗಳಿಂದ ಬಂದಿದ್ದ ಭಕ್ತರುಗಳಿಗೆ ವಿಶ್ವೇಶ್ವರಾನುಗ್ರಹವನ್ನು ಕರುಣಿಸಿ ಭಕ್ತರನ್ನು ಕಾಡುತ್ತಿರುವ ಸಮಸ್ಯೆ,ಸಂಕಷ್ಟಗಳಿಗೆ ಪರಿಹಾರ ರೂಪದಲ್ಲಿ ‘ ಶಿವೋಪಶಮನ’ ನೀಡಿದರು.ಯಾದಗಿರಿ ಜಿಲ್ಲೆಯಿಂದ ಬಂದಿದ್ದ ಸಾಬಣ್ಣ ಎನ್ನುವ ಪಾರ್ಶ್ವವಾಯು ಪೀಡಿತರು ( ಪೀಠಾಧ್ಯಕ್ಷರ ಎದುರು ಕೆಳಗಡೆ ಕುಳಿತಿರುವ ಕೆಂಪುಶಲ್ಯ ಹೊದ್ದಿರುವ ವ್ಯಕ್ತಿ) ಗುಣಮುಖರಾಗಿ ಬಂದಿದ್ದು ಇಂದಿನ ವಿಶೇಷವಾಗಿತ್ತು.ಮಹಾಶೈವ ಧರ್ಮಪೀಠಕ್ಕೆ ಪ್ರತಿವಾರವೂ ನಾನಾ ಬಗೆಯ ಸಮಸ್ಯೆಗಳನ್ನು ಹೊತ್ತ ಭಕ್ತಜನರು ಬರುತ್ತಿದ್ದಾರೆ.’ಮಾತನಾಡುವ ಮಹಾದೇವ’ ಎಂದೇ ಪ್ರಸಿದ್ಧನಾಗಿರುವ ಕ್ಷೇತ್ರೇಶ್ವರ ವಿಶ್ವೇಶ್ವರನ ಸನ್ನಿಧಿಯಲ್ಲಿ ಎಲ್ಲ ಸಮಸ್ಯೆಗಳಿಗೂ ನಿಶ್ಚಿತ ಪರಿಹಾರವಿದೆ.

 

About The Author