ಸಾಲಬಾಧೆ ತಾಳದೆ‌ ಕುರಿಗಾಹಿ ರೈತ ಆತ್ಮಹತ್ಯೆ

ಶಹಾಪುರ:ತಾಲೂಕಿನ ಬಸವಂತಪುರ ಗ್ರಾಮದಲ್ಲಿ ಹನುಮಂತ ಕೊಂಡಾಪುರ ಎನ್ನುವ ಕುರಿಗಾಹಿ ರೈತ ಸಾಲ ಬಾಧೆ ತಾಳದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮದಲ್ಲಿ ನಡೆದಿದೆ. ನಿನ್ನೆ ಬೆಳಿಗ್ಗೆ 5:00 ಗಂ. ಸುಮಾರಿಗೆ ತಮ್ಮ ಮನೆಯಲ್ಲಿಯೇ ಹಗ್ಗದಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.50 ವರ್ಷದ ಹನುಮಂತನಿಗೆ ಮೂರು ಜನ ಮಕ್ಕಳಿದ್ದು, ಆತನ ಅಣ್ಣತಮ್ಮಂದಿರು ಎಲ್ಲರೂ ಕೂಡಿ ಅವಿಭಕ್ತ ಕುಟುಂಬದಲ್ಲಿ ಜೀವನ ಸಾಗಿಸುತ್ತಿದ್ದರು!ಮೂಲತ: ಕುರಿಗಾರನಾಗಿದ್ದ ಹನುಮಂತ ಕೊಂಡಾಪುರ 50 ಕುರಿಗಳು ಮತ್ತು 10 ಮೇಕೆಗಳು ಹೊಂದಿದ್ದು, ಕುಟುಂಬದ ನಿರ್ವಹಣೆಗಾಗಿ ಸುಮಾರು 10 ಲಕ್ಷದಷ್ಟು ಖಾಸಗಿ ಸಾಲ ಮಾಡಿಕೊಂಡಿದ್ದನು ಎಂದು ಹೇಳಲಾಗಿದೆ.

About The Author