ಶಹಾಪುರ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪದಗ್ರಹಣ

ಶಹಾಪುರ : ನಗರದ ನಗರಸಭೆಯ ಸಭಾಂಗಣದಲ್ಲಿ ಶಹಪುರದ ನಗರಸಭೆಯ ಹತ್ತನೇ ನೂತನ ಅಧ್ಯಕ್ಷೆ, ಉಪಾಧ್ಯಕ್ಷೆಯ ಪದಗ್ರಹಣ ಕಾರ್ಯಕ್ರಮ ಜರಗಿತು. ಈ ಸಂದರ್ಭದಲ್ಲಿ ಪೌರಾಯುಕ್ತರಾದ ರಮೇಶ್ ಬಡಿಗೇರ್ ಮಾತನಾಡುತ್ತಾ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಮಾರ್ಗದರ್ಶನದ, ನಗರಸಭೆಯ ಎಲ್ಲಾ ಸದಸ್ಯರ ಸಹಕಾರದಿಂದ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನೇತೃತ್ವದಲ್ಲಿ ನಗರದ ಅಭಿವೃದ್ಧಿ ಕಾರ್ಯ ಮತ್ತು ನಗರದ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು  ತಿಳಿಸಿದರು.
       ನಗರಸಭೆ ಸಭಾಂಗಣದಲ್ಲಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಮೆಹರುನ್ನಿಸಾ ಬೇಗಂ ಹಾಗೂ ಉಪಾಧ್ಯಕ್ಷೆಯಾಗಿ ಭೀಮಬಾಯಿ ದೇವಿಂದ್ರಪ್ಪ ಅವರ ಅಧಿಕಾರ ಪದಗ್ರಹಣ‌ ಕಾರ್ಯಕ್ರಮದಲ್ಲಿ ಪೌರಾಯುಕ್ತರು ಸನ್ಮಾನಿಸಿ ಗೌರವಿಸಿದರು.
ನಗರಸಭೆ ಸಾರ್ವಜನಿಕರ ಸೇವಾಕೇಂದ್ರವಾಗಿದ್ದು, ಪ್ರತಿಯೊಬ್ಬರ ಸಮಸ್ಯೆಗಳಿಗೂ ಸ್ಪಂದಿಸುವ ಮನೋಭಾವನೆ ನಮ್ಮೆಲ್ಲರದಾಗಬೇಕು. ನಾವು ಮಾಡಿದ ಅಭಿವೃದ್ಧಿ ಕಾರ್ಯಗಳು ನೆನಪಿನಲ್ಲಿ ಉಳಿಯುವಂತಾಗಬೇಕು ಎಂದು ಹೇಳಿದರು.
    ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಅಂಬರೇಶಗೌಡ  ದರ್ಶನಪುರ, ಸಣ್ಣನಿಂಗಣ್ಣ ನಾಯ್ಕೋಡಿ ಲಾಲ್‌ಅಹ್ಮದ್ ಖುರೇಶಿ, ಮಹಾದೇವಪ್ಪ ಸಾಲಿಮನಿ, ಖಾಲಿದ, ವಿಜಯಕುಮಾರ, ಶಿವುಕುಮಾರ ತಳವಾರ,ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪೂರಕರ್,ತಾಂತ್ರಿಕ ವಿಭಾಗದ ನಾನಾ ಸಾಹೇಬ, ಶಿವು ಮಹಾಂತ ಚಂದಾಪುರ, ಅಯ್ಯಣ್ಣ ಕನ್ಯಕೋಳುರ, ಗೌಡಪ್ಪಗೌಡ ಆಲ್ದಾಳ, ಬಸವರಾಜ ಹಿರೇಮಠ, ಖಾಜಾ ಪಟೇಲ, ದೇವು ತೋಟಿಗೇರ, ಸೇರಿದಂತೆ ನಗರಸಭೆ ಸದಸ್ಯರು, ನಾಮನಿರ್ದೇಶನ ಸದಸ್ಯರು ಇದ್ದರು.

About The Author