ಸಿಂಡಿಕೇಟ್ ಸದಸ್ಯರಾಗಿ ಡಾ.ಹೆಚ್.ಬೀರಪ್ಪ ಅಧಿಕಾರ ಸ್ವೀಕಾರ

ಶಹಾಪೂರ :ಮೈಸೂರು ಜಿಲ್ಲೆಯ ಜಯಪುರ ಹೋಬಳಿಯ ಡಿ. ಸಾಲುಂಡಿ ಗ್ರಾಮದ ಡಾ.ಹೆಚ್. ಬೀರಪ್ಪ ಅವರು ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾಗಿದ್ದು,  ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾದ ಲಿಂಗರಾಜ ಗಾಂಧಿ ಅವರ ಸಮ್ಮುಖದಲ್ಲಿ ಸಿಂಡಿಕೇಟ್ ಸದಸ್ಯರಾಗಿ ಅಧಿಕಾರ ಸ್ವೀಕಾರ ಮಾಡಿದರು. ಡಾ. ಬೀರಪ್ಪ ಮೈಸೂರು ವಿಶ್ವವಿದ್ಯಾಲಯದ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತರ ಪದವಿ ಪಡೆದಿದ್ದು ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಸಂವಹನ ಅಭಿವೃದ್ಧಿ ದೃಷ್ಟಿಕೋನ ಎಂಬ ವಿಷಯದಲ್ಲಿ ಪಿ ಹೆಚ್ ಡಿ  ಪದವಿ ಮೂರು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು ಈ ಹಿಂದೆ  ಕಾವೇರಿ ನದಿ ನೀರಿನ ಹೋರಾಟದ ವಿಚಾರದಲ್ಲಿ  ತಮ್ಮ ಸರಕಾರಿ  ನೌಕರಿಗೆ ರಾಜೀನಾಮೆ ನೀಡಿ ಏಕಾಂಗಿಯಾಗಿ ಮೈಸೂರಿನಲ್ಲಿ ರಾಜ್ಯ ಹಾಗೂ ರೈತರ ಪರವಾಗಿ ಹೋರಾಟ ಮಾಡಿದ್ದನ್ನು  ಸ್ಮರಿಸಬಹುದು. ಕೃಷಿ ಮನೆತನದ ಸಣ್ಣ ಗ್ರಾಮದಲ್ಲಿ  ಹುಟ್ಟಿದ ಇವರನ್ನು ಉನ್ನತ ಹುದ್ದೆಗೆ  ಆಯ್ಕೆ ಮಾಡಿರುವುದಕ್ಕೆ  ಗ್ರಾಮಸ್ಥರು ಹಾಗೂ ಅವರ ಹಿತೈಷಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

About The Author