ಖಾನಾಪೂರ:ಬಸವ ಜಯಂತಿ ಆಚರಣೆ

ದೇವದುರ್ಗ: ತಾಲೂಕಿನ ಖಾನಾಪುರ ಗ್ರಾಮದಲ್ಲಿ ಇಂದು ಜಗಜ್ಯೋತಿ ವಿಶ್ವಜ್ಯೋತಿ ಬಸವೇಶ್ವರರ ದಿನಾಚರಣೆಯನ್ನು ಆಚರಿಸಲಾಯಿತು.ಎತ್ತಿನಬಂಡಿಯಲ್ಲಿ ಬಸವಣ್ಣನವರ ಭಾವಚಿತ್ರವಿಟ್ಟು ಮೆರವಣಿಗೆ ಮಾಡುವ ಮೂಲಕ ಡೊಳ್ಳು ಬಾಜಿ ಭಜಂತ್ರಿ ಮೂಲಕ ಬಸವೇಶ್ವರ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ದೇವೇಂದ್ರಪ್ಪಗೌಡ ಹಂಚಿನಾಳ ಸಿದ್ದನಗೌಡ ಮಾ.ಪಾಟೀಲ, ಅಮರೇಶಗೌಡ ಪೋ. ಪಾ. ಈಶಪ್ಪಗೌಡ ಕೂಡ್ಲಿಗಿ, ರಡ್ಡೆಪ್ಪಗೌಡ ಕೂಡ್ಲಿಗಿ ,ನಿಂಗಯ್ಯ ಪೂಜಾರಿ, ಚಿದಾನಂದ ಕರವಸೂಲಿಗಾರ, ಹೊನ್ನಪ್ಪಗೌಡ, ಬಾಬುಗೌಡ, ಈಶಪ್ಪ ಕಾಸಿರಾಯ, ಮಸ್ತಾನಿ ನಾಯಕ್ ಕೆಡಿಪಿ ಸದಸ್ಯರು, ಮಾಳಪ್ಪ ಎಸ್.ಕೆ, ಬಸನಗೌಡ ಮಾ.ಪಾ, ಮಹೇಶಗೌಡ ಮಾ.ಪಾ,ಹಾಗೂ ಊರಿನ ಸರ್ವ ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು

About The Author