ಶಹಾಪುರ:ಎಡೆದೊರೆ ನಾಡಿನ ಅಭಿವೃದ್ಧಿಯ ರೂವಾರಿ,ಜನರ ಮನಸಿನಲ್ಲಿ ನೆಲಸಿದ ಜನನಾಯಕ,ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ರೂವಾರಿ, ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ ಶಿವನಗೌಡ ನಾಯಕರವರ ಜನ್ಮದಿನವಿಂದು.ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಶಿವನಗೌಡ ನಾಯಕ್ ರವರ ಅಭಿಮಾನಗಳ ಪಾಲಿಗೆ ಇದೊಂದು ದೊಡ್ಡ ಹಬ್ಬವಾಗಿದೆ.ಪಟ್ಟಣದ ರಸ್ತೆಗಳಲ್ಲಿ ಪ್ಲೇಕ್ಸ ಗಳು ರಾರಾಜಿಸುತ್ತಿವೆ.
ಕಾರ್ಯಕ್ರಮದಲ್ಲಿ ಧರ್ಮಗುರುಗಳು, ಮಠಾಧೀಶರು, ಸಚಿವರಾದ ಶ್ರೀರಾಮುಲು, ವಿ. ಸೋಮಣ್ಣ ಸೇರಿದಂತೆ ಇಡೀ ಸಚಿವರ ದಂಡೇ ಮಾನ್ವಿ ತಾಲೂಕಿಗೆ ಆಗಮಿಸಲಿದೆ. ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಸೇರುವ ನೀರಿಕ್ಷೆ ಇದೆ.ಬಿಜೆಪಿ ಮುಂದುವರೆದವರ ಪಕ್ಷ ಎಂದು ಹೆಸರಾಗಿದ್ದರು, ಅಂತಹ ಪಕ್ಷದಲ್ಲಿ ಸದಾ ಹಿಂದುಳಿದ ಅಹಿಂದ ವರ್ಗದವರ ಪರ ನಿಂತು ಅಭಿವೃದ್ಧಿಯ ಜೊತೆಗೆ ಯುವಕರ ಬೆಳವಣಿಗೆಗೆ ಸದಾ ಪ್ರೋತ್ಸಾಹ ನೀಡುತ್ತಿರುವ ನಾಯಕ ಶಿವನಗೌಡ ನಾಯಕ.ಅತಿ ಚಿಕ್ಕ ವಯಸ್ಸಿನಲ್ಲಿಯೇ ಶಾಸಕರಾಗಿ, ಸಚಿವರಾಗಿ ದೇವದುರ್ಗ ತಾಲೂಕನ್ನೇ ಜಿಲ್ಲೆಯಲ್ಲಿಯೇ ಅಭಿವೃದ್ಧಿಪಡಿಸಿದ ನಾಯಕ. ಸಾಮಾಜಿಕ,ಶೈಕ್ಷಣಿಕವಾಗಿ ರಾಯಚೂರು ಜಿಲ್ಲೆಯನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ದ ಜನನಾಯಕ.ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ 65,000 ಮನೆಗಳನ್ನು ತಾಲೂಕಿಗೆ ತೆಗೆದುಕೊಂಡು ಇಡೀ ತಾಲೂಕನ್ನು ವಸತಿ ರಹಿತ ತಾಲೂಕನ್ನಾಗಿ ಮಾಡಿದ ಜನಪರ ನಾಯಕ.
ಕೊರೋನಾ ಸಂದರ್ಭದಲ್ಲಿ ಅನ್ನದಾಸೋಹ ಕಾರ್ಯಕ್ರಮವನ್ನು ಮಾನ್ವಿ ಮತ್ತು ದೇವದುರ್ಗ ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಮನೆಗೆ ಸುಮಾರು ಒಂದು ಲಕ್ಷ ಮಾಸ್ಕಗಳನ್ನು ಹಂಚಲಾಗಿದೆ .ಇಡೀ ತಾಲೂಕಿನಾದ್ಯಂತ ಶುದ್ಧ ಕುಡಿಯುವ ನೀರು ಮತ್ತು ಕರೋನಾ ರೋಗಿಗಳಿಗೆ ಪ್ರತಿಯೊಂದು ಆಸ್ಪತ್ರೆಗಳಲ್ಲಿ ನೀರಿನ ಜೊತೆಗೆ ಹಣ್ಣುಗಳನ್ನು ಹಂಚಲಾಗಿದೆ.ಸರಕಾರಿ ಮತ್ತು ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಆಹಾರದ ಕಿಟ್ ಗಳನ್ನು ಮತ್ತು ಮಾಸ್ಕಗಳನ್ನು ವಿತರಿಸಲಾಗಿದೆ.
ಶಿವನಗೌಡ ನಾಯಕರು ಅಪಾರ ಯುವಕರ ಪಡೆಯನ್ನು ಹೊಂದಿದ್ದು. ಕ್ರಿಯಾಶೀಲ ಮತ್ತು ಚತುರತೆಯಿಂದ ಕೂಡಿದ ವ್ಯಕ್ತಿಯಾಗಿದ್ದಾರೆ.
ದೇವದುರ್ಗ ತಾಲೂಕಿಗೆ ಐಟಿಐ, ಡಿಪ್ಲೋಮೋ ಎಂಜಿನಿಯರಿಂಗ್ ಕಾಲೇಜುಗಳು, ವಸತಿ ಶಾಲೆಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳು ತಂದಿದ್ದು ಶೈಕ್ಷಣಿಕವಾಗಿ ಮಹತ್ವದ ಸಾಧನೆ ಮಾಡಿದ್ದಾರೆ.ಮುಂದಿನ ದಿನಗಳಲ್ಲಿ ದೇವದುರ್ಗ ತಾಲೂಕಿಗೆ ಸರಕಾರಿ ಮೆಡಿಕಲ್ ಕಾಲೇಜುತರುವ ಪ್ರಯತ್ನದಲ್ಲಿದ್ದಾರೆ.ಎಲ್ಲಾ ಕಾರ್ಯಕ್ರಮದ ಹಿಂದೆ ಬಿಜೆಪಿಯ ಮಾನ್ವಿ ಮತ್ತು ಸಿರವಾರ ತಾಲೂಕಿನ ಶಿವನಗೌಡ ನಾಯಕ ಅಭಿಮಾನಿಗಳ ಬಳಗದ ಶ್ರಮ ಅಪಾರವಾದದ್ದು.
|
|